ಕನಕರು ಉಡುಪಿಯ ಕೃಷ್ಣನನ್ನು ತಿರುಗಿಸಿದರು ಎಂಬುದರ ಅರ್ಥವು ಕೃಷ್ಣಭಕ್ತರನ್ನೂ ತಿರುಗಿಸಿದರು ಎಂಬುದಾಗಿದೆ. ಅವರು ಸಾಮಾಜಿಕ ಸಾಮರಸ್ಯದ ಹರಿಕಾರರು. ಕನಕದಾಸರು ತಮ್ಮನ್ನು ಹೊಲೆಯದಾಸ, ಮಾದಿಗದಾಸ, ಕುಲವಿಲ್ಲದ ಕುರುಬದಾಸ ಎಂದುಕೊಂಡಿದ್ದಾರೆ. ಇಲ್ಲಿ ಕುರುಬ ಎಂದರೆ ಅಷ್ಟಮದಗಳೆಂಬೋ ಕುರಿಗಳ ಕಾಯುವ ಕುರುಬ. ನಮಗೆ ಬೇಕಾಗಿರುವುದು ಕುಲವಿಲ್ಲದ ದಾಸ ಕನಕದಾಸ. ಆ ದಾರಿಯಲ್ಲಿ ಸಾಗೋಣ.