ಬೆಂಗಳೂರು ನಗರದಲ್ಲಿ ನೀರು ಸೋರಿಕೆ ಪ್ರಮಾಣ ಶೇ 37ರಷ್ಟಿದೆ ಎಂಬ ಜಲಮಂಡಳಿ ಅಧ್ಯಕರ ಹೇಳಿಕೆ (ಪ್ರ.ವಾ., ನ. 3) ಗಂಭೀರವಾಗಿ ಯೋಚಿಸಬೇಕಾದದ್ದು. ಈ ಸೋರಿಕೆಗೆ ಕೇವಲ ಜಲಮಂಡಳಿಯನ್ನು ದೂಷಿಸದೆ, ನಗರದ ನಾಗರಿಕರು ಸಹ ಹೊಣೆಗಾರರು ಎಂಬುದನ್ನು ಮರೆಯುವಂತಿಲ್ಲ. ಮನೆಯಲ್ಲಿಯ ಸೋರುವ ನಲ್ಲಿಗಳನ್ನು ಸರಿಪಡಿಸದಿರುವುದು, ನೀರಿನ ಸಂಪ್ ತುಂಬಿದಾಗ ನೀರು ನಿಲ್ಲುವ ಹಾಗೆ ಸಂಪ್ನಲ್ಲಿ ಸೂಕ್ತ ಸಾಧನ ಅಳವಡಿಸದಿರುವುದು, ಸಂಪ್ನಿಂದ ಮಹಡಿ ಮೇಲಿನ ಟ್ಯಾಂಕ್ಗೆ ನೀರು ಹತ್ತುವುದಕ್ಕೆ ಸ್ವಯಂಚಾಲಿತ ನಿಯಂತ್ರಣ ಸಾಧನ ಅಳವಡಿಸದಿರುವುದು... ಈ ಎಲ್ಲವನ್ನೂ ನೀರು ಸೋರಿಕೆಯ ಅಡಿಯಲ್ಲೇ ಪರಿಗಣಿಸಬೇಕಾಗುತ್ತದೆ. ಇದರ ಪ್ರಮಾಣ ಒಟ್ಟಾರೆ ಸೋರಿಕೆ ಪ್ರಮಾಣಕ್ಕೆ ಹೋಲಿಸಿದಲ್ಲಿ ಗಣನೀಯವಲ್ಲದೇ ಇರಬಹುದು. ಆದರೆ ಹನಿ ಹನಿಗೂಡಿದರೆ ಹಳ್ಳ ಎನ್ನುವ ಹಾಗೆ, ಜವಾಬ್ದಾರಿಯುತ ನಾಗರಿಕರು ಇವುಗಳ ಕಡೆ ಗಮನಹರಿಸಿದಲ್ಲಿ ಸೋರಿಕೆ ಪ್ರಮಾಣ ತುಸುವಾದರೂ ಕಡಿಮೆ ಆಗಲಿದೆ.