ಹುಲಿ ಯೋಜನೆ, ಚೆಕ್ ಡ್ಯಾಂ ಯೋಜನೆ ಮುಂತಾದವುಗಳಿಂದ ಈಗಾಗಲೇ ಈ ಭಾಗದ ಜನರು ಬೇಸತ್ತಿದ್ದಾರೆ. ಇದರ ಜೊತೆಗೆ ಪ್ರಸಕ್ತ ಯೋಜನೆಯೂ ಜಾರಿಯಾದರೆ ಜೀವಸಂಕುಲ, ಅರಣ್ಯ ನಶಿಸಿ ಹೋಗುತ್ತವೆ. ಈಗಾಗಲೇ ಅರಣ್ಯ ನಾಶದಿಂದ ಈ ಭಾಗದ ವಾರ್ಷಿಕ ಸರಾಸರಿ ಮಳೆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೊಸನಗರ, ಸೊರಬ, ಸಾಗರ, ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಾವಿಗಳು ಬತ್ತಿವೆ. ಅಂತರ್ಜಲ ಕುಸಿದಿದೆ. ಇಂಥ ಸ್ಥಿತಿಯಲ್ಲಿ ಹೊಸ ಯೋಜನೆಯನ್ನು ಒಪ್ಪಿಕೊಳ್ಳಲು ಇಲ್ಲಿನ ಜನ ಸಿದ್ಧರಿಲ್ಲ. ‘ಜೀವ ಬಿಟ್ಟೇವು ಶರಾವತಿ ಬಿಡೆವು’ ಎಂಬ ಕೂಗು ಪ್ರತಿಧ್ವನಿಸುತ್ತಿದೆ.