ಆರೋಗ್ಯವಿದ್ದರೆ ಎಲ್ಲ ಸಂಪತ್ತೂ ಇದ್ದಂತೆ ಎಂಬುದು ಅನುಭವದ ಮಾತು. ಕೋವಿಡ್ ಸಾಂಕ್ರಾಮಿಕದಿಂದಾಗಿ ಮದುವೆ, ಮುಂಜಿ, ಶ್ರಾದ್ಧ, ಸೀಮಂತ, ಆರಾಧನೆ, ಸಮಾರಾಧನೆ, ಶಾಲಾ ಕಾಲೇಜು ಎಲ್ಲವೂ ಹಿಂದಿನಂತೆ ಪೂರ್ಣಪ್ರಮಾಣದಲ್ಲಿ ನಡೆಯದಿರುವುದು ಮಕ್ಕಳಿಗೂ ತಿಳಿದ ವಿಚಾರ. ಆದರೆ ಸಾಹಿತ್ಯ ಸಮ್ಮೇಳನವೆಂಬ ಜಾತ್ರೆಯನ್ನು ನಡೆಸಲೇಬೇಕೆಂದು ತೀರ್ಮಾನಿಸಿ ಕೆಲವರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ! ವೇದಿಕೆಯಲ್ಲಿ ಭಾವೋದ್ವೇಗದಿಂದ ಏನನ್ನು ಬೇಕಾದರೂ ಹೇಳಬಹುದು. ಅದರೆ ಮೊದಲು ಅನ್ನ, ಆರೋಗ್ಯ. ಆನಂತರ ಸಾಹಿತ್ಯ, ಸಂಗೀತ, ಕ್ರೀಡೆ, ನಾಟ್ಯ ಎಲ್ಲವೂ.