ಈಚೆಗೆ ಒಂದು ಮುಂಜಾನೆ ಹೊಲದಲ್ಲಿದ್ದಾಗ, ನೂರಾರು ಕೂಲಿಕಾರ್ಮಿಕರು ದೂರದಲ್ಲಿ ಏನೋ ಗಲಾಟೆ ಮಾಡುತ್ತಿದ್ದರು. ಅದೇನೆಂದು ನೋಡಹೋದರೆ, ಅವರೆಲ್ಲ ಸೇರಿ ಒಂದು ಮೊಲವನ್ನು ಅಟ್ಟಾಡಿಸಿ ಹಿಡಿಯಲು ಪ್ರಯತ್ನಿಸುತ್ತಾ ಆ ಬಡಪಾಯಿಯ ಮೇಲೆ ಹಾರೆ, ಗುದ್ದಲಿಗಳನ್ನು ಎಸೆದು ಕೊಲ್ಲಲು ಪ್ರಯತ್ನಿಸುತ್ತಿದ್ದರು. ಅವರ ರಣಕೇಕೆಯ ನಡುವೆ ‘ನಿಲ್ಲಿ’ ಎಂಬ ನನ್ನ ಸಣ್ಣ ಕೂಗು ಯಾರೊಬ್ಬರಿಗೂ ಕೇಳಲಿಲ್ಲ. ಮೊಲ ಬರ್ಬರವಾಗಿ ಬೇಟೆಯಾಗಿ ಹೋಯಿತು. ಆ ಕೂಲಿಕಾರ್ಮಿಕರಿಗೆ ನೀವು ಮಾಡುತ್ತಿರುವುದು ತಪ್ಪು ಎಂದು ಹೇಳಿದರೂ ಅವರು ಕೇಳಲಿಲ್ಲ, ಅರಣ್ಯ ಇಲಾಖೆಗೆ ದೂರು ಕೊಡುತ್ತೇನೆಂದು ಎಚ್ಚರಿಸಿದರೂ ಜಗ್ಗಲಿಲ್ಲ.