ಸುತ್ತೂರಿನಲ್ಲಿ ಜಾತ್ರೆಯ ಸಂದರ್ಭದಲ್ಲಿ ಸಿಡಿಮದ್ದಿಗೆ ಬೆದರಿ ಮರಿಯಾನೆಗಳು ಓಡಿ ಜನರು ಗಾಯಗೊಂಡ ವರದಿ ಗುರುವಾರ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದೆ. ಭಾರಿ ಪ್ರಮಾಣದಲ್ಲಿ ಅನಾಹುತ ನಡೆಯದಿರುವುದು ಅದೃಷ್ಟ ಎಂದೇ ಹೇಳಬೇಕು. ಈ ಹಿಂದೆ ದೇವಸ್ಥಾನಗಳಲ್ಲಿ ಆನೆ ಸಾಕುವುದನ್ನು ನಿಷೇಧಿಸಬೇಕು ಎನ್ನುವ ಬೇಡಿಕೆಯನ್ನು ಕೆಲವರು ಇಟ್ಟಿದ್ದರು.
ಸಾಮಾನ್ಯವಾಗಿ ಪ್ರಾಣಿಗಳಿಗೆ ಸಂಬಂಧಪಟ್ಟ ಯಾವ ಬೇಡಿಕೆಗಳನ್ನೂ ಯಾವ ಸರ್ಕಾರವೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಆನೆಗಳು ಮೂಲತಃ ಸದ್ದುಗದ್ದಲವನ್ನು ಬಯಸುವುದಿಲ್ಲ.