ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸುವವರ ಬಳಿಯಿಂದ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಕಳವು ಹೆಚ್ಚುತ್ತಿದೆ. ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಕಳವು ಎಂದು ದೂರು ಕೊಟ್ಟರೆ ತೆಗೆದುಕೊಳ್ಳುವುದಿಲ್ಲ. ಬದಲಾಗಿ ಕಳೆದು ಹೋಗಿದೆ ಎಂದು ದೂರು ಕೊಡಿ ಎನ್ನುತ್ತಾರೆ.
ಕಾರಣ ತಮ್ಮ ವ್ಯಾಪ್ತಿಯಲ್ಲಿ ಕಳವು ಹೆಚ್ಚುತ್ತಿರುವುದು ಅವರಿಗೆ ಇಷ್ಟವಿಲ್ಲ. ಏಕೆಂದರೆ ಹಿರಿಯ ಅಧಿಕಾರಿಗಳಿಗೆ ಕಳವು ಹೆಚ್ಚುತ್ತಿರುವ ಬಗ್ಗೆ ಸ್ಪಷ್ಟನೆ ನೀಡಬೇಕಾಗುತ್ತದೆ. ಈ ಕಾರಣಕ್ಕೆ ಅವರು ಕಳೆದು ಹೋಗಿದೆ ಎಂದು ದೂರು ಕೊಡುವಂತೆ ಹೇಳುತ್ತಾರೆ. ಮುಖ್ಯಮಂತ್ರಿಯವರು ತರಾಟೆ ತೆಗೆದುಕೊಂಡ ಬಳಿಕವೂ ಪೊಲೀಸರ ಸ್ವಭಾವ ಬದಲಾಗಿಲ್ಲ.