ಪ್ರಜಾವಾಣಿಯ ‘ಮೆಟ್ರೊ–ಬೆಂಗಳೂರು’ ಸಂದರ್ಶನದಲ್ಲಿ (ನ.3) ಹಿರಿಯ ರಂಗಕರ್ಮಿ ಅರುಂಧತಿ ನಾಗ್ ಅವರು ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ರಂಗಭೂಮಿಯಲ್ಲಾದ ಪ್ರಮುಖ ಪಲ್ಲಟಗಳ ಬಗ್ಗೆ ಮಾತನಾಡುತ್ತಾ ‘...ಇಂದಿಗೂ ಕಂಬಾರರು, ಕಾರ್ನಾಡರನ್ನು ಬಿಟ್ಟರೆ ಹೊಸ ನಾಟಕಕಾರರು ಕಾಣುತ್ತಿಲ್ಲ...’ ಎಂದಿದ್ದಾರೆ.
ಹಾಗಾದರೆ ಕನ್ನಡ ನಾಟಕ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಕೆ.ವೈ. ನಾರಾಯಣಸ್ವಾಮಿ, ಬೊಳುವಾರು, ರಾಜೇಂದ್ರ ಕಾರಂತ, ರಾಜಪ್ಪ ದಳವಾಯಿ, ಮಂಜುನಾಥ ಬೆಳಕೆರೆ... ಇವರೆಲ್ಲರೂ ಯಾವ ತಲೆಮಾರಿನ ನಾಟಕಕಾರರು? ಇದನ್ನು ಅರುಂಧತಿ ಅವರೇ ಸ್ಪಷ್ಟಪಡಿಸಬೇಕು.
ರಂಗಚಟುವಟಿಕೆಯನ್ನೇ ಉಸಿರಾಗಿಸಿ ಕೊಂಡು ಬದುಕುತ್ತಿರುವ ಅರುಂಧತಿಯವರ ಈ ಹೇಳಿಕೆ ರಂಗಪ್ರೇಮಿಯಾದ ನನ್ನಲ್ಲಿ ಆಶ್ಚರ್ಯ ಮೂಡಿಸಿದೆ.