ಸಾಫ್ಟ್ವೇರ್ ಉದ್ಯೋಗಿಗಳಲ್ಲಿ ಈ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂಥ ಅವಘಡಗಳನ್ನು ತಡೆಯಲು ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕೌನ್ಸೆಲಿಂಗ್ ವ್ಯವಸ್ಥೆ ಮಾಡಬೇಕು.
ಪದವಿ, ಸಂಬಳವೊಂದೇ ಯಶಸ್ಸಿನ ಮಾನದಂಡ ಅಲ್ಲ. ಜೀವನ ಎದುರಿಸುವ ಕಲೆ ರೂಢಿಸಿಕೊಳ್ಳುವುದು ಮುಖ್ಯ. ಶಿಕ್ಷಣ ನಮ್ಮ ಯುವ ಪೀಳಿಗೆಯನ್ನು ನಿಶ್ಶಕ್ತಗೊಳಿಸಬಾರದು. ಪೋಷಕರು, ಉದ್ಯೋಗದಾತ ಸಂಸ್ಥೆಗಳು ಇದಕ್ಕೆ ಕಾರಣಗಳನ್ನು ಅರಿಯಲು ಯತ್ನಿಸಬೇಕು.