<p>ಮಾಹಿತಿ ಯುಗದಲ್ಲಿ ಮಾನವನಿಗೆ ದಿನ-ನಿತ್ಯ ಮಾಹಿತಿಯ ಕಣಜ ಬೇಕಾಗುತ್ತೆ. ಮನೋರಂಜನೆಗಾಗಿ ದೇಶದಲ್ಲಿ ನೂರಕ್ಕಿಂತಲೂ ಹೆಚ್ಚು ಟಿ.ವಿ ಚಾನೆಲ್ಗಳಿವೆ.<br /> <br /> ನಮ್ಮ ರಾಜ್ಯದಲ್ಲಿ ಏಳೆಂಟು ಚಾನೆಲ್ಗಳಿವೆ. ದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ರೈತರಿದ್ದಾರೆ, ಆದರೆ ಕೃಷಿಗೆ ಪ್ರತ್ಯೇಕ ಟಿ.ವಿ ಚಾನೆಲ್ ಇಲ್ಲದಿರುವುದು ವಿಚಿತ್ರ.<br /> <br /> ರಾಜ್ಯದಲ್ಲಿ ಕೃಷಿಗೆ ಒತ್ತುಕೊಟ್ಟು ವಲಯವಾರು ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಿರುವುದು ಉತ್ತಮ ಬೆಳವಣಿಗೆ. ಹಾಗೆಯೇ ಸಹಸ್ರಾರು ಜನರಿಗೆ ಕೆಲಸ ಕೊಟ್ಟಿರುವ ಕೃಷಿಗೆ ಪ್ರತ್ಯೇಕ ಟಿ.ವಿ ಚಾನೆಲ್ ಅತ್ಯವಶ್ಯಕವಾಗಿದೆ. ನೆರೆಯ ಕೇರಳದಲ್ಲಿ ಈಗಾಗಲೇ ಈ ಪ್ರಯತ್ನ ನಡೆದಿದೆ.<br /> <br /> ಹವಾಮಾನ ವೈಪರೀತ್ಯ, ಬೆಳೆಯಲ್ಲಿನ ಏರುಪೇರು ಹಾಗೂ ಅತಿಯಾದ ಮಣ್ಣಿನ ಸವಕಳಿಯಿಂದಾಗಿ ಕೃಷಿ ಬದಲಾಗುತ್ತಿದೆ. ಕೆಲ ಟಿ.ವಿ ಚಾನೆಲ್ಗಳು ಅಪರೂಪಕ್ಕೆ ಕೆಲ ಕೃಷಿ ಸಂಬಂಧಿಸಿದ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿರುವುದು ಆಶಾದಾಯಕ. ಅಷ್ಟಕ್ಕೆ ಸೀಮಿತಗೊಳಿಸಿದರೆ ಸಾಲದು.<br /> <br /> ಈಗಲಾದರೂ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಕೃಷಿಗಾಗಿ ಪ್ರತೇಕ ಟಿ.ವಿ ಚಾನೆಲ್ ಪ್ರಾರಂಭಿಸಿದರೆ ರೈತ ವರ್ಗಕ್ಕೆ ತುಂಬಾ ಉಪಯೋಗವಾದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಾಹಿತಿ ಯುಗದಲ್ಲಿ ಮಾನವನಿಗೆ ದಿನ-ನಿತ್ಯ ಮಾಹಿತಿಯ ಕಣಜ ಬೇಕಾಗುತ್ತೆ. ಮನೋರಂಜನೆಗಾಗಿ ದೇಶದಲ್ಲಿ ನೂರಕ್ಕಿಂತಲೂ ಹೆಚ್ಚು ಟಿ.ವಿ ಚಾನೆಲ್ಗಳಿವೆ.<br /> <br /> ನಮ್ಮ ರಾಜ್ಯದಲ್ಲಿ ಏಳೆಂಟು ಚಾನೆಲ್ಗಳಿವೆ. ದೇಶದಲ್ಲಿ ಭಾರಿ ಸಂಖ್ಯೆಯಲ್ಲಿ ರೈತರಿದ್ದಾರೆ, ಆದರೆ ಕೃಷಿಗೆ ಪ್ರತ್ಯೇಕ ಟಿ.ವಿ ಚಾನೆಲ್ ಇಲ್ಲದಿರುವುದು ವಿಚಿತ್ರ.<br /> <br /> ರಾಜ್ಯದಲ್ಲಿ ಕೃಷಿಗೆ ಒತ್ತುಕೊಟ್ಟು ವಲಯವಾರು ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಿರುವುದು ಉತ್ತಮ ಬೆಳವಣಿಗೆ. ಹಾಗೆಯೇ ಸಹಸ್ರಾರು ಜನರಿಗೆ ಕೆಲಸ ಕೊಟ್ಟಿರುವ ಕೃಷಿಗೆ ಪ್ರತ್ಯೇಕ ಟಿ.ವಿ ಚಾನೆಲ್ ಅತ್ಯವಶ್ಯಕವಾಗಿದೆ. ನೆರೆಯ ಕೇರಳದಲ್ಲಿ ಈಗಾಗಲೇ ಈ ಪ್ರಯತ್ನ ನಡೆದಿದೆ.<br /> <br /> ಹವಾಮಾನ ವೈಪರೀತ್ಯ, ಬೆಳೆಯಲ್ಲಿನ ಏರುಪೇರು ಹಾಗೂ ಅತಿಯಾದ ಮಣ್ಣಿನ ಸವಕಳಿಯಿಂದಾಗಿ ಕೃಷಿ ಬದಲಾಗುತ್ತಿದೆ. ಕೆಲ ಟಿ.ವಿ ಚಾನೆಲ್ಗಳು ಅಪರೂಪಕ್ಕೆ ಕೆಲ ಕೃಷಿ ಸಂಬಂಧಿಸಿದ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿರುವುದು ಆಶಾದಾಯಕ. ಅಷ್ಟಕ್ಕೆ ಸೀಮಿತಗೊಳಿಸಿದರೆ ಸಾಲದು.<br /> <br /> ಈಗಲಾದರೂ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಕೃಷಿಗಾಗಿ ಪ್ರತೇಕ ಟಿ.ವಿ ಚಾನೆಲ್ ಪ್ರಾರಂಭಿಸಿದರೆ ರೈತ ವರ್ಗಕ್ಕೆ ತುಂಬಾ ಉಪಯೋಗವಾದಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>