ಶಿಕ್ಷಕರ ನೇಮಕಾತಿಯಲ್ಲಿ ಇತ್ತೀಚೆಗೆ ಗೊಂದಲಹೆಚ್ಚಾಗುತ್ತಿವೆ. 2013ರಲ್ಲಿ 4000 ಪ್ರಾಥಮಿಕ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಿ, ಸ್ಥಗಿತಗೊಳಿಸಲಾಗಿತ್ತು. ಸಂವಿಧಾನದ ಕಲಂ 371ಜೆ ಅನುಷ್ಠಾನಗೊಳಿಸುವ ಉದ್ದೇಶದಿಂದ ನೇಮಕ ಪ್ರಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು.
ಆದರೆ, ಅರ್ಜಿ ಶುಲ್ಕ ₨ 420 ಹಿಂದಿರುಗಿಸಿಲ್ಲ. ಈಗ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಕೇಂದ್ರೀಕೃತ ದಾಖಲಾತಿ ಘಟಕದಿಂದ ಆದೇಶ ಹೊರಡಿಸಲಾಗಿದೆ. ಟಿ.ಇ.ಟಿಯಲ್ಲಿ ತೇರ್ಗಡೆ ಹೊಂದಿ ಅರ್ಹತೆ ಪಡೆದರೆ ಮಾತ್ರ ಶಿಕ್ಷಕರ ನೇಮಕಕ್ಕೆ ಅರ್ಜಿ ಸಲ್ಲಿಸಲು ಸಾಧ್ಯ ಎಂದು ತಿಳಿಸಲಾಗಿದೆ.
ಹಾಗಾದರೆ, ನೇಮಕ ಪರೀಕ್ಷೆ ಯಾವ ರೀತಿ ಇರುತ್ತದೆ? ಟಿ.ಇ.ಟಿ, 1 ರಿಂದ 8ನೇ ತರಗತಿವರೆಗೆ ಶಿಕ್ಷಕರಾಗಲು ಮಾತ್ರ. 9 ಮತ್ತು 10ನೇ ತರಗತಿ ಶಿಕ್ಷಕರಾಗಲೂ ಏನು ಮಾಡಬೇಕು ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಬೇಕು.