<p>`ತಪ್ಪು ತಪ್ಪೇ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ' ಎಂದು ಪಾಟೀಲ ಪುಟ್ಟಪ್ಪನವರು (ಪ್ರ. ವಾ. ನ. 19) ತಮ್ಮ ದೊಡ್ಡತನ ಮೆರೆದಿದ್ದಾರೆ. ಅವರ ನಡೆ ನುಡಿ ಆದರ್ಶಪ್ರಾಯವಾದುದು. ಅವರು ನಾಡೋಜರೇ ಸರಿ.<br /> <br /> `ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳಲ್ಲಿನ ಪ್ರಭುತ್ವಗಳು ಅಳಿದು ಹೋದರೂ ಮೈಸೂರು ಪ್ರಭುತ್ವವು ಉಳಿದು ಕೊಂಡಿದ್ದಿತು' ಎಂದು ಪಾಪು ನೆನೆಪಿಸಿದ್ದಾರೆ: ಅದು ಇನ್ನೊಂದು ರೀತಿಯಲ್ಲಿ ರಾಜ ಪ್ರಮುಖರಾಗಿ, ಆ ಮೇಲೆ ರಾಜ್ಯಪಾಲರಾಗಿ ಇಲ್ಲಿ ಮುಂದುವರೆದಿತ್ತು. ನನಗೆ ತಿಳಿದಂತೆ, ಕರ್ನಾಟಕ ಸರ್ಕಾರ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕುವೆಂಪು ಅವರಿಗೆ `ರಾಷ್ಟ್ರಕವಿ' ಪ್ರಶಸ್ತಿ ನೀಡಲು ಮುಂದಾಯಿತು. ಆಗ ಕುವೆಂಪು ಕೆಲವು ಷರತ್ತುಗಳನ್ನು ಒಡ್ಡಿದರು.<br /> <br /> ಅವುಗಳಲ್ಲಿ ಒಂದು: ರಾಜ್ಯಪಾಲರನ್ನು ಸಂವಿಧಾನಕ್ಕೆ ಅನುಸಾರವಾಗಿ ನೇಮಿಸಬೇಕು. ಕರ್ನಾಟಕ ಸರ್ಕಾರ ಅದರಂತೆ ನಡೆದುಕೊಂಡಿತು. ಇಲ್ಲಿ ರಾಜ್ಯಪಾಲರಾಗಿದ್ದ `ಮಹಾರಾಜ' ಜಯಚಾಮರಾಜ ಒಡೆಯರ್ ಅವರನ್ನು ಮದರಾಸ್ ರಾಜ್ಯಕ್ಕೆ ವರ್ಗಾಯಿಸಿದರು. ಆ ಮೇಲೆ ಕುವೆಂಪು `ರಾಷ್ಟ್ರ ಕವಿ' ಪ್ರಶಸ್ತಿ ಸ್ವೀಕರಿಸಿದರು. ಹೀಗೆ ಮೈಸೂರಿನಲ್ಲಿ ರಾಜಪ್ರಭುತ್ವ ಕೊನೆಯಾಯಿತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ತಪ್ಪು ತಪ್ಪೇ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ' ಎಂದು ಪಾಟೀಲ ಪುಟ್ಟಪ್ಪನವರು (ಪ್ರ. ವಾ. ನ. 19) ತಮ್ಮ ದೊಡ್ಡತನ ಮೆರೆದಿದ್ದಾರೆ. ಅವರ ನಡೆ ನುಡಿ ಆದರ್ಶಪ್ರಾಯವಾದುದು. ಅವರು ನಾಡೋಜರೇ ಸರಿ.<br /> <br /> `ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳಲ್ಲಿನ ಪ್ರಭುತ್ವಗಳು ಅಳಿದು ಹೋದರೂ ಮೈಸೂರು ಪ್ರಭುತ್ವವು ಉಳಿದು ಕೊಂಡಿದ್ದಿತು' ಎಂದು ಪಾಪು ನೆನೆಪಿಸಿದ್ದಾರೆ: ಅದು ಇನ್ನೊಂದು ರೀತಿಯಲ್ಲಿ ರಾಜ ಪ್ರಮುಖರಾಗಿ, ಆ ಮೇಲೆ ರಾಜ್ಯಪಾಲರಾಗಿ ಇಲ್ಲಿ ಮುಂದುವರೆದಿತ್ತು. ನನಗೆ ತಿಳಿದಂತೆ, ಕರ್ನಾಟಕ ಸರ್ಕಾರ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕುವೆಂಪು ಅವರಿಗೆ `ರಾಷ್ಟ್ರಕವಿ' ಪ್ರಶಸ್ತಿ ನೀಡಲು ಮುಂದಾಯಿತು. ಆಗ ಕುವೆಂಪು ಕೆಲವು ಷರತ್ತುಗಳನ್ನು ಒಡ್ಡಿದರು.<br /> <br /> ಅವುಗಳಲ್ಲಿ ಒಂದು: ರಾಜ್ಯಪಾಲರನ್ನು ಸಂವಿಧಾನಕ್ಕೆ ಅನುಸಾರವಾಗಿ ನೇಮಿಸಬೇಕು. ಕರ್ನಾಟಕ ಸರ್ಕಾರ ಅದರಂತೆ ನಡೆದುಕೊಂಡಿತು. ಇಲ್ಲಿ ರಾಜ್ಯಪಾಲರಾಗಿದ್ದ `ಮಹಾರಾಜ' ಜಯಚಾಮರಾಜ ಒಡೆಯರ್ ಅವರನ್ನು ಮದರಾಸ್ ರಾಜ್ಯಕ್ಕೆ ವರ್ಗಾಯಿಸಿದರು. ಆ ಮೇಲೆ ಕುವೆಂಪು `ರಾಷ್ಟ್ರ ಕವಿ' ಪ್ರಶಸ್ತಿ ಸ್ವೀಕರಿಸಿದರು. ಹೀಗೆ ಮೈಸೂರಿನಲ್ಲಿ ರಾಜಪ್ರಭುತ್ವ ಕೊನೆಯಾಯಿತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>