‘ಈ ಕಾನೂನು ಮಾಡಿ ದಲಿತರನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸುವುದು ಬೇಡ’ ಎಂಬ ವಿಶಾಲಾರ್ಥದಲ್ಲಿ ಮಹಾತ್ಮ ಗಾಂಧಿ ಈ ರೀತಿ ಮಾಡಿದರು. ಆದರೆ ಅಂಬೇಡ್ಕರ್ ಅವರ ಸ್ವಾಭಿಮಾನದ ಬಗ್ಗೆ ಮಾತನಾಡುವ ನಮ್ಮ ಕವಿ ಏನು ಮಾಡಿದ್ದಾರೆ? ರಾಮಕೃಷ್ಣ ಹೆಗಡೆ ನೀಡಿದ ಎಂಎಲ್ಸಿ ಪಟ್ಟಕ್ಕಾಗಿ ಪ್ರೊ. ಬಿ. ಕೃಷ್ಣಪ್ಪ ಜೀವ ತೇದು ಕಟ್ಟಿದ್ದ ಡಿಎಸ್ಎಸ್ನ ಸಮಾಧಿ ಮಾಡಿದರು! ಇವರಿಗೂ ಮೊದಲೆ ಪ್ರೊ. ಕೃಷ್ಣಪ್ಪನವರು ಕ್ರಾಂತಿಕವಿತೆಗಳನ್ನು (‘ನೆನಪುಗಳೆ ನಿಲ್ಲಿ ನಿಲ್ಲಿ’) ಬರೆದಿದ್ದರೂ, ಪ್ರಕಟಿಸದೇ ಇದ್ದ ಕಾರಣ ಇವರು ಪ್ರಥಮ ದಲಿತಕವಿ ಎಂದೂ ಹೆಸರಾದರು!