<p>ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೆ ಚುನಾವಣೆಗಳು ನಡೆಯುತ್ತಿವೆ. ಈ ಚುನಾವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಕಣಕ್ಕೆ ಇಳಿಸಿರುವ ಅಭ್ಯರ್ಥಿಗಳ ಹಿನ್ನೆಲೆ ಗಮನಿಸಿದಾಗ ಪಕ್ಷಗಳ ಆದ್ಯತೆ ಏನು ಎಂಬುದೇ ತಿಳಿಯುತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯೊಂದೇ ಮಾನದಂಡ ಎಂಬುದು ನಿಚ್ಚಳವಾಗುತ್ತದೆ.<br /> <br /> ಪಕ್ಷನಿಷ್ಠೆ, ತತ್ವನಿಷ್ಠೆಗಳಿಗೆ ಯಾವ ಬೆಲೆಯೂ ಇದ್ದಂತೆ ಕಾಣುವುದಿಲ್ಲ. ರಾಮ್ ಜೇಠ್ಮಲಾನಿಯವರು ಈ ಸಲ ರಾಜ್ಯಸಭೆಗೆ ಬಿಹಾರದಿಂದ ಆರ್ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. 2010ರಲ್ಲಿ ಅವರು ಬಿಜೆಪಿ ಮೂಲಕ ರಾಜ್ಯಸಭೆಯಲ್ಲಿ ಸ್ಥಾನ ಪಡೆದಿದ್ದರು. ಆಗ ಬಿಜೆಪಿ.<br /> <br /> ಈಗ, ಆ ಪಕ್ಷದ ಸಿದ್ಧಾಂತಕ್ಕೆ ತದ್ವಿರುದ್ಧವಾದ ನಿಲುವು ಹೊಂದಿರುವ ಆರ್ಜೆಡಿ ಅಂಗಳ! ಜೇಠ್ಮಲಾನಿ ಅವರಿಗೆ ನಿಷ್ಠೆ ಬದಲಿಸುವುದೆಂದರೆ ಅಂಗಿ ಬದಲಿಸಿದಂತೆ! ಈ ವಯಸ್ಸಿನಲ್ಲೂ ಅವರಿಗೆ ರಾಜ್ಯಸಭೆಯಲ್ಲಿ ಮುಂದುವರೆಯುವ ಆಸೆ! ಅಂತಹ ಆಸೆಗೆ ನೀರೆರೆಯುವ ಪಕ್ಷಗಳಿಗೂ ಕೊರತೆ ಇಲ್ಲ. ಮುಂದೊಂದು ದಿನ ಅವರು ಕಾಂಗ್ರೆಸ್ ಅಥವಾ ಎಡಪಕ್ಷಗಳನ್ನು ಅಪ್ಪಿಕೊಂಡರೂ ಆಶ್ಚರ್ಯವಿಲ್ಲ.<br /> <br /> ರಾಜಕೀಯ ಪಕ್ಷಗಳು ಇನ್ನಾದರೂ ಇಂತಹ ಗೋಸುಂಬೆಗಳಿಗೆ ಮಣೆ ಹಾಕದೆ ತತ್ವ–ಸಿದ್ಧಾಂತಗಳಿಗೆ ಬೆಲೆ ಕೊಡುವ ನಿಷ್ಠಾವಂತರನ್ನು ಬೆಂಬಲಿಸಿದರೆ ಹಿರಿಯರ ಸದನ ಎಂಬ ಗೌರವಕ್ಕೆ ಪಾತ್ರವಾದ ರಾಜ್ಯಸಭೆ ಅಥವಾ ವಿಧಾನ ಪರಿಷತ್ತುಗಳ ಘನತೆ ಉಳಿದೀತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯಸಭೆ ಹಾಗೂ ವಿಧಾನ ಪರಿಷತ್ತಿಗೆ ಚುನಾವಣೆಗಳು ನಡೆಯುತ್ತಿವೆ. ಈ ಚುನಾವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಕಣಕ್ಕೆ ಇಳಿಸಿರುವ ಅಭ್ಯರ್ಥಿಗಳ ಹಿನ್ನೆಲೆ ಗಮನಿಸಿದಾಗ ಪಕ್ಷಗಳ ಆದ್ಯತೆ ಏನು ಎಂಬುದೇ ತಿಳಿಯುತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯೊಂದೇ ಮಾನದಂಡ ಎಂಬುದು ನಿಚ್ಚಳವಾಗುತ್ತದೆ.<br /> <br /> ಪಕ್ಷನಿಷ್ಠೆ, ತತ್ವನಿಷ್ಠೆಗಳಿಗೆ ಯಾವ ಬೆಲೆಯೂ ಇದ್ದಂತೆ ಕಾಣುವುದಿಲ್ಲ. ರಾಮ್ ಜೇಠ್ಮಲಾನಿಯವರು ಈ ಸಲ ರಾಜ್ಯಸಭೆಗೆ ಬಿಹಾರದಿಂದ ಆರ್ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. 2010ರಲ್ಲಿ ಅವರು ಬಿಜೆಪಿ ಮೂಲಕ ರಾಜ್ಯಸಭೆಯಲ್ಲಿ ಸ್ಥಾನ ಪಡೆದಿದ್ದರು. ಆಗ ಬಿಜೆಪಿ.<br /> <br /> ಈಗ, ಆ ಪಕ್ಷದ ಸಿದ್ಧಾಂತಕ್ಕೆ ತದ್ವಿರುದ್ಧವಾದ ನಿಲುವು ಹೊಂದಿರುವ ಆರ್ಜೆಡಿ ಅಂಗಳ! ಜೇಠ್ಮಲಾನಿ ಅವರಿಗೆ ನಿಷ್ಠೆ ಬದಲಿಸುವುದೆಂದರೆ ಅಂಗಿ ಬದಲಿಸಿದಂತೆ! ಈ ವಯಸ್ಸಿನಲ್ಲೂ ಅವರಿಗೆ ರಾಜ್ಯಸಭೆಯಲ್ಲಿ ಮುಂದುವರೆಯುವ ಆಸೆ! ಅಂತಹ ಆಸೆಗೆ ನೀರೆರೆಯುವ ಪಕ್ಷಗಳಿಗೂ ಕೊರತೆ ಇಲ್ಲ. ಮುಂದೊಂದು ದಿನ ಅವರು ಕಾಂಗ್ರೆಸ್ ಅಥವಾ ಎಡಪಕ್ಷಗಳನ್ನು ಅಪ್ಪಿಕೊಂಡರೂ ಆಶ್ಚರ್ಯವಿಲ್ಲ.<br /> <br /> ರಾಜಕೀಯ ಪಕ್ಷಗಳು ಇನ್ನಾದರೂ ಇಂತಹ ಗೋಸುಂಬೆಗಳಿಗೆ ಮಣೆ ಹಾಕದೆ ತತ್ವ–ಸಿದ್ಧಾಂತಗಳಿಗೆ ಬೆಲೆ ಕೊಡುವ ನಿಷ್ಠಾವಂತರನ್ನು ಬೆಂಬಲಿಸಿದರೆ ಹಿರಿಯರ ಸದನ ಎಂಬ ಗೌರವಕ್ಕೆ ಪಾತ್ರವಾದ ರಾಜ್ಯಸಭೆ ಅಥವಾ ವಿಧಾನ ಪರಿಷತ್ತುಗಳ ಘನತೆ ಉಳಿದೀತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>