ಚುನಾವಣಾ ನೀತಿಸಂಹಿತೆ ಜಾರಿಗೆ ಬಂದ ನಂತರ ಯಾರಾದರೂ ಮದುವೆ, ಮುಂಜಿ, ಗೃಹಪ್ರವೇಶ ಮುಂತಾದವುಗಳನ್ನು ನಡೆಸುವುದಿದ್ದರೂ ಅದಕ್ಕೆ ಅನುಮತಿ ಪಡೆದುಕೊಳ್ಳಬೇಕೆಂದು ಚುನಾವಣಾಧಿಕಾರಿ ತಾಕೀತು ಮಾಡುತ್ತಾರೆ.
ಅಂತಹ ಸಮಾರಂಭಗಳಲ್ಲಿ ಯಾರಾದರೂ ಬಂಧು ಮಿತ್ರರು, ರಾಜಕೀಯ ಧುರೀಣರು ಭಾಗವಹಿಸಿದರಂತೂ ಸಮಾರಂಭದ ಇಡೀ ಖರ್ಚನ್ನು ಅಂತಹ ಧುರೀಣರ ಪಕ್ಷದ ಅಥವಾ ಅಭ್ಯರ್ಥಿಯ ಲೆಕ್ಕಕ್ಕೆ ಹಾಕಲಾಗುತ್ತದೆ. ಇದರಿಂದಾಗಿ ಅನೇಕ ಸಾರಿ ತಮ್ಮ ಹತ್ತಿರದ ಬಂಧುಗಳ ಸಮಾರಂಭಗಳಿಗೆ ರಾಜಕೀಯ ಮುಖಂಡರು ಹೋಗಲೂ ಹೆದರುವ ಪರಿಸ್ಥಿತಿ ಬಂದೊದಗಿದೆ.
ಆದರೆ ಇತ್ತೀಚೆಗೆ ರಾಜ್ಯ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ಏರಿಸುವ ಪ್ರಸ್ತಾವಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿರುವುದಾಗಿ ವರದಿಯಾಗಿದೆ. ಇದು ನೇರ ಆಮಿಷ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ. ಇದರಿಂದ ಆಡಳಿತ ಪಕ್ಷಕ್ಕೆ ಖಂಡಿತ ಲಾಭವಾಗುತ್ತದೆ ಎಂಬುದನ್ನು ಊಹಿಸಬಹುದು. ಹಾಗಾದರೆ, ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ಲವೇ?