<p>‘ಅಧಿಕ ಬಡ್ಡಿ ವಿರುದ್ಧ ಹೋರಾಟ ಅಗತ್ಯ’ (ಪ್ರ.ವಾ., ಆ. 11). ಚಿತ್ರದುರ್ಗ ಹತ್ತಿರದ ಮದಕರಿಪುರದಲ್ಲಿ ಶಿವಮೂರ್ತಿ ಮುರುಘಾ ಶರಣರು ‘ಬೆಳ್ಳಿಹಬ್ಬ: ಹಳ್ಳಿಗೊಂದು ಅಭಿವೃದ್ಧಿ’ ಎಂಬ ಚಿಂತನಾಗೋಷ್ಠಿಯಲ್ಲಿ ಈ ಮೇಲಿನ ಮಾತನ್ನು ಹೇಳಿದ್ದಾರೆ.<br /> <br /> ಅಧಿಕ ಬಡ್ಡಿ ದಂಧೆ ವಿರುದ್ಧ ಹೋರಾಟ ಮಾಡುವ ಅಗತ್ಯ ನಿಜಕ್ಕೂ ಇದೆ. ಅದರಲ್ಲೂ ಚಳ್ಳಕೆರೆ, ಚಿತ್ರದುರ್ಗದಲ್ಲಿ ಅಧಿಕ ಬಡ್ಡಿ ದಂಧೆಯ ಕರಾಳ ಮುಖಗಳು ಈ ಭಾಗದ ಎಲ್ಲರಿಗೂ ತಿಳಿದಿರುವಂತಹುದೇ. ಈ ಭಾಗದಲ್ಲಿ ಇದನ್ನು ‘ಮೀಟರ್ ಬಡ್ಡಿ’ ಅಂತಲೂ ಕರೆಯುವುದುಂಟು. ಅಂದರೆ, ಗಂಟೆಗಿಷ್ಟು, ದಿನಕ್ಕಿಷ್ಟು ಬಡ್ಡಿ ಎಂದು ಬಡ್ಡಿಕೋರರು ನಿಗದಿ ಮಾಡಿ ಅಸಹಾಯಕರನ್ನು ಹಿಂಡಿ ಹಿಪ್ಪೆ ಮಾಡುತ್ತಾರೆ.<br /> <br /> ಇಂತಹ ಬಡ್ಡಿ ದಂಧೆಯಿಂದ ಅನೇಕರು ಬೀದಿಗೆ ಬಂದ ನಿದರ್ಶನಗಳಿವೆ. ಆದರೂ, ಇಂತಹ ಪ್ರಕರಣಗಳು ಬಹಿರಂಗಗೊಳ್ಳುವುದು ಕಡಿಮೆ. ಮೀಟರ್ ಬಡ್ಡಿಕೋರರು ಇಂದು ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾರೆ. ಚಿನ್ನದ ಸರ, ಉಂಗುರಗಳನ್ನು ಧರಿಸಿ ಮಿಂಚುತ್ತಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಈ ದಂಧೆ ಬಗ್ಗೆ ಶರಣರಿಗೆ ಮಾಹಿತಿ ಇರುವ ಕಾರಣಕ್ಕೇ ಹೋರಾಟ ಅಗತ್ಯ ಎಂದಿದ್ದಾರೆ. ಮುರುಘಾ ಶರಣರೇ ಈ ಹೋರಾಟದ ನೇತೃತ್ವ ವಹಿಸಿದರೆ ಜಿಲ್ಲೆಯ ಮಟ್ಟಿಗಾದರೂ ಈ ಶೋಷಣೆ ತಪ್ಪಿಸಬಹುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಅಧಿಕ ಬಡ್ಡಿ ವಿರುದ್ಧ ಹೋರಾಟ ಅಗತ್ಯ’ (ಪ್ರ.ವಾ., ಆ. 11). ಚಿತ್ರದುರ್ಗ ಹತ್ತಿರದ ಮದಕರಿಪುರದಲ್ಲಿ ಶಿವಮೂರ್ತಿ ಮುರುಘಾ ಶರಣರು ‘ಬೆಳ್ಳಿಹಬ್ಬ: ಹಳ್ಳಿಗೊಂದು ಅಭಿವೃದ್ಧಿ’ ಎಂಬ ಚಿಂತನಾಗೋಷ್ಠಿಯಲ್ಲಿ ಈ ಮೇಲಿನ ಮಾತನ್ನು ಹೇಳಿದ್ದಾರೆ.<br /> <br /> ಅಧಿಕ ಬಡ್ಡಿ ದಂಧೆ ವಿರುದ್ಧ ಹೋರಾಟ ಮಾಡುವ ಅಗತ್ಯ ನಿಜಕ್ಕೂ ಇದೆ. ಅದರಲ್ಲೂ ಚಳ್ಳಕೆರೆ, ಚಿತ್ರದುರ್ಗದಲ್ಲಿ ಅಧಿಕ ಬಡ್ಡಿ ದಂಧೆಯ ಕರಾಳ ಮುಖಗಳು ಈ ಭಾಗದ ಎಲ್ಲರಿಗೂ ತಿಳಿದಿರುವಂತಹುದೇ. ಈ ಭಾಗದಲ್ಲಿ ಇದನ್ನು ‘ಮೀಟರ್ ಬಡ್ಡಿ’ ಅಂತಲೂ ಕರೆಯುವುದುಂಟು. ಅಂದರೆ, ಗಂಟೆಗಿಷ್ಟು, ದಿನಕ್ಕಿಷ್ಟು ಬಡ್ಡಿ ಎಂದು ಬಡ್ಡಿಕೋರರು ನಿಗದಿ ಮಾಡಿ ಅಸಹಾಯಕರನ್ನು ಹಿಂಡಿ ಹಿಪ್ಪೆ ಮಾಡುತ್ತಾರೆ.<br /> <br /> ಇಂತಹ ಬಡ್ಡಿ ದಂಧೆಯಿಂದ ಅನೇಕರು ಬೀದಿಗೆ ಬಂದ ನಿದರ್ಶನಗಳಿವೆ. ಆದರೂ, ಇಂತಹ ಪ್ರಕರಣಗಳು ಬಹಿರಂಗಗೊಳ್ಳುವುದು ಕಡಿಮೆ. ಮೀಟರ್ ಬಡ್ಡಿಕೋರರು ಇಂದು ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾರೆ. ಚಿನ್ನದ ಸರ, ಉಂಗುರಗಳನ್ನು ಧರಿಸಿ ಮಿಂಚುತ್ತಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಈ ದಂಧೆ ಬಗ್ಗೆ ಶರಣರಿಗೆ ಮಾಹಿತಿ ಇರುವ ಕಾರಣಕ್ಕೇ ಹೋರಾಟ ಅಗತ್ಯ ಎಂದಿದ್ದಾರೆ. ಮುರುಘಾ ಶರಣರೇ ಈ ಹೋರಾಟದ ನೇತೃತ್ವ ವಹಿಸಿದರೆ ಜಿಲ್ಲೆಯ ಮಟ್ಟಿಗಾದರೂ ಈ ಶೋಷಣೆ ತಪ್ಪಿಸಬಹುದು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>