<p>ಚುನಾವಣಾ ದಿನ ಹತ್ತಿರ ಬರುತ್ತಿದೆ. ಪಕ್ಷಗಳು ಬಿಡುಗಡೆ ಮಾಡುವ ಪ್ರಣಾಳಿಕೆಗಳಲ್ಲಿ ಎಷ್ಟು ಭರವಸೆಗಳು ಈಡೇರುತ್ತವೆ ಎಂಬುದನ್ನು ಪಕ್ಕಕ್ಕಿಟ್ಟು ನೋಡಿದರೆ, ಕನಿಷ್ಠ ಪಕ್ಷ ಅಂತಹ ವಿಚಾರಗಳ ಬಗ್ಗೆ ಪಕ್ಷಗಳಿಗೆ ಅರಿವಿದೆ ಎಂಬುದಾದರೂ ತಿಳಿಯುತ್ತದೆ.</p>.<p>ಎಲ್ಲ ಪಕ್ಷಗಳೂ ಪ್ರಣಾಳಿಕೆಗಳ ಮೂಲಕ ಜನರನ್ನು ತಕ್ಷಣಕ್ಕೆ ಖುಷಿ ಪಡಿಸಲು ಮುಂದಾಗಿದ್ದುದು ಹಿಂದಿನ ಚುನಾವಣೆಗಳ ಸಂದರ್ಭದ ಪ್ರಣಾಳಿಕೆ ನೋಡಿದರೆ ಸ್ಪಷ್ಟವಾಗುತ್ತದೆ. ನಮ್ಮೆಲ್ಲರ ಇರುವಿಕೆಗೆ, ನೆಮ್ಮದಿಗೆ ಕಾರಣವಾಗುವ ನೆಲ-ಜಲ, ಕಾಡು, ಪ್ರಾಣಿ-ಪಕ್ಷಿ ಇವೇ ಮೊದಲಾದವುಗಳ ಬಗ್ಗೆ ಯಾರೂ ಪ್ರಮುಖವಾಗಿ ಪ್ರಸ್ತಾಪಿಸಿಲ್ಲ.</p>.<p>ನಾವೆಲ್ಲರೂ ನೆಮ್ಮದಿಯಿಂದ ಬದುಕಬೇಕಾದರೆ ಸ್ವಚ್ಛಪರಿಸರ ಅತ್ಯಗತ್ಯ. ಈ ನಿಟ್ಟಿನಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವ ಪಕ್ಷಗಳ ಬದ್ಧತೆ ಮುಖ್ಯವಾಗುತ್ತದೆ. ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪರಿಸರ ಸಂರಕ್ಷಣೆಯನ್ನು ಪ್ರಮುಖ ವಿಷಯವನ್ನಾಗಿ ಪರಿಗಣಿಸಬೇಕು. ಅಲ್ಲಿ ಪ್ರಸ್ತಾಪಿಸಲಾಗುವ ವಿಷಯಗಳೇ ಪಕ್ಷಗಳ ಮುಂದಿನ ಕಾರ್ಯಸೂಚಿಗಳಾಗಿರುವುದರಿಂದ, ಪರಿಸರ ಕೇಂದ್ರೀಕೃತ ಸುಸ್ಥಿರ ಅಭಿವೃದ್ಧಿಯೆಡೆಗೆ ಪಕ್ಷ ಹೊಂದಿರುವ ದೃಷ್ಟಿಕೋನ ನಿಚ್ಚಳವಾಗುತ್ತದೆ.</p>.<p>ಅದರ ಸೂಕ್ತ ಅನುಷ್ಠಾನವೂ ಅಷ್ಟೇ ಮುಖ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚುನಾವಣಾ ದಿನ ಹತ್ತಿರ ಬರುತ್ತಿದೆ. ಪಕ್ಷಗಳು ಬಿಡುಗಡೆ ಮಾಡುವ ಪ್ರಣಾಳಿಕೆಗಳಲ್ಲಿ ಎಷ್ಟು ಭರವಸೆಗಳು ಈಡೇರುತ್ತವೆ ಎಂಬುದನ್ನು ಪಕ್ಕಕ್ಕಿಟ್ಟು ನೋಡಿದರೆ, ಕನಿಷ್ಠ ಪಕ್ಷ ಅಂತಹ ವಿಚಾರಗಳ ಬಗ್ಗೆ ಪಕ್ಷಗಳಿಗೆ ಅರಿವಿದೆ ಎಂಬುದಾದರೂ ತಿಳಿಯುತ್ತದೆ.</p>.<p>ಎಲ್ಲ ಪಕ್ಷಗಳೂ ಪ್ರಣಾಳಿಕೆಗಳ ಮೂಲಕ ಜನರನ್ನು ತಕ್ಷಣಕ್ಕೆ ಖುಷಿ ಪಡಿಸಲು ಮುಂದಾಗಿದ್ದುದು ಹಿಂದಿನ ಚುನಾವಣೆಗಳ ಸಂದರ್ಭದ ಪ್ರಣಾಳಿಕೆ ನೋಡಿದರೆ ಸ್ಪಷ್ಟವಾಗುತ್ತದೆ. ನಮ್ಮೆಲ್ಲರ ಇರುವಿಕೆಗೆ, ನೆಮ್ಮದಿಗೆ ಕಾರಣವಾಗುವ ನೆಲ-ಜಲ, ಕಾಡು, ಪ್ರಾಣಿ-ಪಕ್ಷಿ ಇವೇ ಮೊದಲಾದವುಗಳ ಬಗ್ಗೆ ಯಾರೂ ಪ್ರಮುಖವಾಗಿ ಪ್ರಸ್ತಾಪಿಸಿಲ್ಲ.</p>.<p>ನಾವೆಲ್ಲರೂ ನೆಮ್ಮದಿಯಿಂದ ಬದುಕಬೇಕಾದರೆ ಸ್ವಚ್ಛಪರಿಸರ ಅತ್ಯಗತ್ಯ. ಈ ನಿಟ್ಟಿನಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವ ಪಕ್ಷಗಳ ಬದ್ಧತೆ ಮುಖ್ಯವಾಗುತ್ತದೆ. ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪರಿಸರ ಸಂರಕ್ಷಣೆಯನ್ನು ಪ್ರಮುಖ ವಿಷಯವನ್ನಾಗಿ ಪರಿಗಣಿಸಬೇಕು. ಅಲ್ಲಿ ಪ್ರಸ್ತಾಪಿಸಲಾಗುವ ವಿಷಯಗಳೇ ಪಕ್ಷಗಳ ಮುಂದಿನ ಕಾರ್ಯಸೂಚಿಗಳಾಗಿರುವುದರಿಂದ, ಪರಿಸರ ಕೇಂದ್ರೀಕೃತ ಸುಸ್ಥಿರ ಅಭಿವೃದ್ಧಿಯೆಡೆಗೆ ಪಕ್ಷ ಹೊಂದಿರುವ ದೃಷ್ಟಿಕೋನ ನಿಚ್ಚಳವಾಗುತ್ತದೆ.</p>.<p>ಅದರ ಸೂಕ್ತ ಅನುಷ್ಠಾನವೂ ಅಷ್ಟೇ ಮುಖ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>