ನಾಮಫಲಕಗಳಲ್ಲಿ ಕನ್ನಡ ಬಳಕೆಯ ಬಗ್ಗೆ ಹೈಕೋರ್ಟ್ ತೀರ್ಪು ಕನ್ನಡಿಗರಲ್ಲಿ ಆತಂಕ ಹುಟ್ಟಿಸಿರುವುದು ಸಹಜ. ಆದರೆ ಕನ್ನಡದ ಕೆಲಸ ಎಲ್ಲವೂ ಕಾನೂನಿನ ಮೂಲಕವೇ ಆಗಬೇಕೆಂದಿಲ್ಲ.
ಬೇರೆ ರಾಜ್ಯಗಳಲ್ಲಿ ಹುಟ್ಟಿದರೂ ಇಲ್ಲಿನ ಗಾಳಿ, ಅನ್ನ, ನೀರು ಸೇವಿಸಿರುವ ಜನರು ಸ್ವಯಂ ಪ್ರೇರಣೆಯಿಂದ ಕನ್ನಡದಲ್ಲಿ ಫಲಕಗಳನ್ನು ಬರೆಯಿಸಿ ಹಾಕಲಿ. ನೆರೆಯ ತಮಿಳುನಾಡಲ್ಲಿ ನಾಮಫಲಕಗಳು ತಮಿಳು ಮತ್ತು ಆಂಗ್ಲ ಭಾಷೆಯ ಹೊರತಾಗಿ ಬೇರೆ ಭಾಷೆಗಳಲ್ಲಿ ಇಲ್ಲ.
ಅನ್ಯ ಭಾಷೆಯ ಜನರು ಕನ್ನಡ ಭಾಷೆಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು. ತಮಿಳುನಾಡಿನಲ್ಲಿ ಇರುವ ಕನ್ನಡಿಗರು ತಮಿಳು ಕಲಿತು ಅಲ್ಲಿನ ಜನರ ಜತೆ ಬೆರೆತು ಹೋದಂತೆ ಇಲ್ಲಿನ ಅನ್ಯಭಾಷೆಯ ಜನರು ಕನ್ನಡಿಗರ ಜತೆ ಬೆರೆಯಲಿ. ಕೇವಲ ತಮಿಳರು ಅಲ್ಲ, ಎಲ್ಲ ಭಾಷಿಕರು ಬೆರೆತು ಬಾಳಲಿ.