ಅದರಲ್ಲೂ ಅನುದಾನ ನೀಡಬೇಕೆಂದು ಯಾವ ಮಠವೂ ಬಿ.ಎಸ್.ವೈ.ಗೆ ಅರ್ಜಿ ಸಲ್ಲಿಸಿರಲಿಲ್ಲ ಎಂಬ ತಮ್ಮ ಸರಳ ಮಾತಿನ ಮೂಲಕ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಕಾಲದ ಕೋಟಿ ಕೋಟಿಗಳ ಕೋಮುವಾದಿ ರಾಜಕೀಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಷ್ಟೇ ಸರಳವಾಗಿ ಬಹಿರಂಗಪಡಿಸಿದ್ದಾರೆ. ಮಠಗಳಿಗೆ ಈ ರೀತಿಯಾಗಿ ದಾನ ಮಾಡಿರುವ ಯಡಿಯೂರಪ್ಪನವರು ಚರ್ಚು ಮತ್ತು ಮಸೀದಿಗಳಿಗೂ ದಾನ ನೀಡಬಹುದಾಗಿತ್ತಲ್ಲವೆ?
-ಡಾ. ಮ. ನ. ಜವರಯ್ಯ, ಮೈಸೂರು .