<p>ಯೋಧರೊಬ್ಬರು ಸೇವೆಯಲ್ಲಿದ್ದಾಗ ಮೃತಪಟ್ಟರೆ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಆದರೆ, ಮಾಜಿ ಯೋಧರು ಮೃತಪಟ್ಟಾಗ ಸರ್ಕಾರ ಕನಿಷ್ಠ ಗೌರವ ಸೂಚಿಸದಿರುವುದು ವಿಪರ್ಯಾಸ.<br /> <br /> ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಶಿವನಿ ಹೋಬಳಿಯ ಅನುವನಹಳ್ಳಿ ಗ್ರಾಮದ ಮಾಜಿ ಯೋಧ ಟಿ.ಜಿ. ಜಯದೇವ್ ಅವರು ಜೂನ್ 23 ರಂದು ನಿಧನರಾದರು.<br /> <br /> ಇವರ ನಿಧನ ವಾರ್ತೆಯನ್ನು ತರೀಕೆರೆಯ ಪೊಲೀಸ್ ಉಪಅಧೀಕ್ಷಕರಿಗೆ (ಡಿವೈಎಸ್ಪಿ) ತಿಳಿಸಿದಾಗ ಅವರು, `ಯಾವುದೇ ರೀತಿಯ ಗೌರವ ಸೂಚಿಸಲು ಸರ್ಕಾರ ಆದೇಶ ನೀಡಿಲ್ಲ' ಎಂದು ಉಪದೇಶಿಸಿದರು.<br /> <br /> ಚೀನಾ- ಭಾರತ ಯುದ್ಧದಲ್ಲಿ ಈ ಮಾಜಿ ಯೋಧ ಹೋರಾಡಿದ್ದರು. ಗ್ರಾಮಸ್ಥರು ಇವರನ್ನು `ಮಿಲಿಟರಿ ಜಯಣ್ಣ' ಎಂದೇ ಕರೆಯುತ್ತಿದ್ದರು.<br /> ದೇಶ ರಕ್ಷಣೆಗೆ ಹೋರಾಡಿದ ಧೀರನಿಗೆ ಗೌರವ ಸಲ್ಲಿಸದಿದ್ದುದು ವಿಷಾದದ ಸಂಗತಿ. ಇನ್ನಾದರೂ ಮಾಜಿ ಯೋಧರು ಮೃತಪಟ್ಟಾಗ ಅಂತ್ಯಸಂಸ್ಕಾರದಲ್ಲಿ ಸರ್ಕಾರಿ ಗೌರವ ಸಲ್ಲುವಂತಾಗಬೇಕು.<br /> <strong>-ಎ.ವಿ. ಜಯಣ್ಣ, ಅನುವನಹಳ್ಳಿ, ತರೀಕೆರೆ ತಾಲ್ಲೂಕು .</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯೋಧರೊಬ್ಬರು ಸೇವೆಯಲ್ಲಿದ್ದಾಗ ಮೃತಪಟ್ಟರೆ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಆದರೆ, ಮಾಜಿ ಯೋಧರು ಮೃತಪಟ್ಟಾಗ ಸರ್ಕಾರ ಕನಿಷ್ಠ ಗೌರವ ಸೂಚಿಸದಿರುವುದು ವಿಪರ್ಯಾಸ.<br /> <br /> ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಶಿವನಿ ಹೋಬಳಿಯ ಅನುವನಹಳ್ಳಿ ಗ್ರಾಮದ ಮಾಜಿ ಯೋಧ ಟಿ.ಜಿ. ಜಯದೇವ್ ಅವರು ಜೂನ್ 23 ರಂದು ನಿಧನರಾದರು.<br /> <br /> ಇವರ ನಿಧನ ವಾರ್ತೆಯನ್ನು ತರೀಕೆರೆಯ ಪೊಲೀಸ್ ಉಪಅಧೀಕ್ಷಕರಿಗೆ (ಡಿವೈಎಸ್ಪಿ) ತಿಳಿಸಿದಾಗ ಅವರು, `ಯಾವುದೇ ರೀತಿಯ ಗೌರವ ಸೂಚಿಸಲು ಸರ್ಕಾರ ಆದೇಶ ನೀಡಿಲ್ಲ' ಎಂದು ಉಪದೇಶಿಸಿದರು.<br /> <br /> ಚೀನಾ- ಭಾರತ ಯುದ್ಧದಲ್ಲಿ ಈ ಮಾಜಿ ಯೋಧ ಹೋರಾಡಿದ್ದರು. ಗ್ರಾಮಸ್ಥರು ಇವರನ್ನು `ಮಿಲಿಟರಿ ಜಯಣ್ಣ' ಎಂದೇ ಕರೆಯುತ್ತಿದ್ದರು.<br /> ದೇಶ ರಕ್ಷಣೆಗೆ ಹೋರಾಡಿದ ಧೀರನಿಗೆ ಗೌರವ ಸಲ್ಲಿಸದಿದ್ದುದು ವಿಷಾದದ ಸಂಗತಿ. ಇನ್ನಾದರೂ ಮಾಜಿ ಯೋಧರು ಮೃತಪಟ್ಟಾಗ ಅಂತ್ಯಸಂಸ್ಕಾರದಲ್ಲಿ ಸರ್ಕಾರಿ ಗೌರವ ಸಲ್ಲುವಂತಾಗಬೇಕು.<br /> <strong>-ಎ.ವಿ. ಜಯಣ್ಣ, ಅನುವನಹಳ್ಳಿ, ತರೀಕೆರೆ ತಾಲ್ಲೂಕು .</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>