<p>`ಅಧಿಕಾರಚ್ಯುತಿ~ಯ ಭೀತಿಯ ಆರೋಪ ಹೊತ್ತಿರುವ ಚಾಮಾರಾಜನಗರದ ಚಾಮರಾಜೇಶ್ವರ ಸನ್ನಿಧಿಯಲ್ಲಿ ಅಷ್ಟಮಂಗಲ ಪ್ರಣೀತ ಯಜ್ಞಯಾಗಾದಿಗಳು ವೈಭವೋಪೇತವಾಗಿ ನೆರವೇರಿವೆ. <br /> <br /> ರಾಜಕಾರಣಿಗಳ `ಮಂಗಲ~ವನ್ನೇ ಪ್ರಧಾನವಾಗಿರಿಸಿಕೊಂಡ ಇಂತಹ ವೈದಿಕ ಪ್ರಕ್ರಿಯೆಗಳು ಸಫಲವಾಗುತ್ತವೆಯೇ? `ಗತ~ ವಾದುದನ್ನು ನೋಡಿದರೆ `ಇಲ್ಲ~ವೆಂದೇ ಹೇಳಬೇಕಾಗಿದೆ.<br /> <br /> ಹಿಂದೆ ಇಂದಿರಾ ಗಾಂಧಿಯವರ ಶ್ರೇಯಸ್ಸಿಗಾಗಿ ತಲೆ ಬೋಳಿಸಿಕೊಂಡ (ತಾತ್ಕಾಲಿಕವಾಗಿ) 200 ಮಂದಿ ವಿಪ್ರೋತ್ತಮರು ದೆಹಲಿಗೆ ತೆರಳಿ ಯಜ್ಞಕರ್ಮಾನುಷ್ಠಾನಗಳನ್ನು ನೆರವೇರಿಸಿದ್ದರು. ಆದರೆ ಇಂದಿರಾ ಗಾಂಧಿಯವರು ತಮ್ಮ ಅಂಗರಕ್ಷಕರಿಗೇ ಬಲಿಯಾದರು!<br /> <br /> ಎಚ್.ಡಿ.ದೇವೇಗೌಡ, ಎಸ್. ಎಂ. ಕೃಷ್ಣ, ಧರ್ಮಸಿಂಗ್ ಮೊದಲಾದವರು ಮೌಢ್ಯವನ್ನು ಬೆಂಬಲಿಸಿದವರೇ. <br /> <br /> ರೆಡ್ಡಿ ಸೋದರರ ಪರವಾಗಿ ಬೆಂಗಳೂರಿನಲ್ಲಿ ವೈಭವದ ಯಜ್ಞಯಾಗಾದಿಗಳು ನಡೆದಿದ್ದವು. ಯಡಿಯೂರಪ್ಪ, ಕುಮಾರಸ್ವಾಮಿಗಳು ಸಾಕಷ್ಟು ಯಜ್ಞಯಾಗಾದಿಗಳನ್ನು ನಡೆಸಿದ್ದರು. ಅವರೆಲ್ಲ ಈಗೇನಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. <br /> <br /> ನಾವು `ಸರಿ~ ಯಾಗಿದ್ದರೆ ಯಾವುದಕ್ಕೂ ಭಯಪಡಬೇಕಾಗಿಲ್ಲ. ತಪ್ಪು ಮಾರ್ಗದಲ್ಲಿ ನಡೆದಾಗ ಪಾಪಪ್ರಜ್ಞೆ ಕಾಡುತ್ತದೆ. ಆಗ ಅವರು ~ಪರಿಹಾರ~ಕ್ಕೆಂದು ಜ್ಯೋತಿಷಿಗಳಿಗೆ ಶರಣಾಗುತ್ತಾರೆ. <br /> <br /> ಜ್ಯೋತಿಷಿಗಳು ಮತ್ತು ಪುರೋಹಿತವರ್ಗ ಇವರ `ಪಾಪಪ್ರಜ್ಞೆ~ಯನ್ನು `ನಗದು~ಮಾಡಿಸಿಕೊಳ್ಳುತ್ತದೆ. ಒಂದಂತೂ ನಿಜ, ಮೂರ್ಖರನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಅಧಿಕಾರಚ್ಯುತಿ~ಯ ಭೀತಿಯ ಆರೋಪ ಹೊತ್ತಿರುವ ಚಾಮಾರಾಜನಗರದ ಚಾಮರಾಜೇಶ್ವರ ಸನ್ನಿಧಿಯಲ್ಲಿ ಅಷ್ಟಮಂಗಲ ಪ್ರಣೀತ ಯಜ್ಞಯಾಗಾದಿಗಳು ವೈಭವೋಪೇತವಾಗಿ ನೆರವೇರಿವೆ. <br /> <br /> ರಾಜಕಾರಣಿಗಳ `ಮಂಗಲ~ವನ್ನೇ ಪ್ರಧಾನವಾಗಿರಿಸಿಕೊಂಡ ಇಂತಹ ವೈದಿಕ ಪ್ರಕ್ರಿಯೆಗಳು ಸಫಲವಾಗುತ್ತವೆಯೇ? `ಗತ~ ವಾದುದನ್ನು ನೋಡಿದರೆ `ಇಲ್ಲ~ವೆಂದೇ ಹೇಳಬೇಕಾಗಿದೆ.<br /> <br /> ಹಿಂದೆ ಇಂದಿರಾ ಗಾಂಧಿಯವರ ಶ್ರೇಯಸ್ಸಿಗಾಗಿ ತಲೆ ಬೋಳಿಸಿಕೊಂಡ (ತಾತ್ಕಾಲಿಕವಾಗಿ) 200 ಮಂದಿ ವಿಪ್ರೋತ್ತಮರು ದೆಹಲಿಗೆ ತೆರಳಿ ಯಜ್ಞಕರ್ಮಾನುಷ್ಠಾನಗಳನ್ನು ನೆರವೇರಿಸಿದ್ದರು. ಆದರೆ ಇಂದಿರಾ ಗಾಂಧಿಯವರು ತಮ್ಮ ಅಂಗರಕ್ಷಕರಿಗೇ ಬಲಿಯಾದರು!<br /> <br /> ಎಚ್.ಡಿ.ದೇವೇಗೌಡ, ಎಸ್. ಎಂ. ಕೃಷ್ಣ, ಧರ್ಮಸಿಂಗ್ ಮೊದಲಾದವರು ಮೌಢ್ಯವನ್ನು ಬೆಂಬಲಿಸಿದವರೇ. <br /> <br /> ರೆಡ್ಡಿ ಸೋದರರ ಪರವಾಗಿ ಬೆಂಗಳೂರಿನಲ್ಲಿ ವೈಭವದ ಯಜ್ಞಯಾಗಾದಿಗಳು ನಡೆದಿದ್ದವು. ಯಡಿಯೂರಪ್ಪ, ಕುಮಾರಸ್ವಾಮಿಗಳು ಸಾಕಷ್ಟು ಯಜ್ಞಯಾಗಾದಿಗಳನ್ನು ನಡೆಸಿದ್ದರು. ಅವರೆಲ್ಲ ಈಗೇನಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಿದೆ. <br /> <br /> ನಾವು `ಸರಿ~ ಯಾಗಿದ್ದರೆ ಯಾವುದಕ್ಕೂ ಭಯಪಡಬೇಕಾಗಿಲ್ಲ. ತಪ್ಪು ಮಾರ್ಗದಲ್ಲಿ ನಡೆದಾಗ ಪಾಪಪ್ರಜ್ಞೆ ಕಾಡುತ್ತದೆ. ಆಗ ಅವರು ~ಪರಿಹಾರ~ಕ್ಕೆಂದು ಜ್ಯೋತಿಷಿಗಳಿಗೆ ಶರಣಾಗುತ್ತಾರೆ. <br /> <br /> ಜ್ಯೋತಿಷಿಗಳು ಮತ್ತು ಪುರೋಹಿತವರ್ಗ ಇವರ `ಪಾಪಪ್ರಜ್ಞೆ~ಯನ್ನು `ನಗದು~ಮಾಡಿಸಿಕೊಳ್ಳುತ್ತದೆ. ಒಂದಂತೂ ನಿಜ, ಮೂರ್ಖರನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>