ಉತ್ತರಾಖಂಡದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದ ಭೀಕರ ದುರಂತದ ಸಂದರ್ಭದಲ್ಲಿ, ಆ ರಾಜ್ಯದ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು, ಗಂಭೀರ ಅಪಾಯದಲ್ಲಿ ಸಿಲುಕಿರುವ ಜನತೆಯ ಪ್ರಾಣ ರಕ್ಷಣೆ ಮತ್ತು ಆರ್ಥಿಕ ಪರಿಹಾರದ ಬಗೆಗೆ ಆಲೋಚಿಸಬೇಕು. ಅದನ್ನು ಬಿಟ್ಟು ಜನತೆಯ ರಕ್ಷಣೆಗಾಗಿ ಯಜ್ಞ ಯಾಗಾದಿಗಳನ್ನು ನಡೆಸಬೇಕೆಂದಿರುವ ಅವರ ಅವೈಚಾರಿಕ ಆಲೋಚನೆಗಳನ್ನು ಸದ್ಯಕ್ಕೆ ಬದಿಗೆ ಸರಿಸುವುದು ಸೂಕ್ತ.