ಆ ಸಂಗತಿಯನ್ನು ಇಡೀ ದೇಶವೇ ಮನಗಂಡಿದೆ. ರಾಮನನ್ನು ಪೂಜಿಸುವ ಹಕ್ಕು ರಾಮನ ಭಕ್ತರಿಗೆ ಇದ್ದೇ ಇದೆ. ಸಂವಿಧಾನದತ್ತವಾದ ಆ ಹಕ್ಕನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಆದರೆ, ಅದನ್ನೊಂದು ರಾಜಕೀಯ ಬಂಡವಾಳವನ್ನಾಗಿ ಪರಿವರ್ತಿಸುತ್ತಿರುವ ಬಿಜೆಪಿಯ ಕೆಲವು ರಾಜಕಾರಣಿಗಳ ಆಲೋಚನೆ, ಕೇವಲ ಸಮಾಜವಿರೋಧಿ ಮಾತ್ರವಲ್ಲ, ಅದೊಂದು ಸಂವಿಧಾನವಿರೋಧಿ ಧೋರಣೆಯೂ ಆಗಿದೆ. ಹಾಗಾಗಿ, ಅಯೋಧ್ಯೆಯ ರಾಮನಗುಡಿಯಂಥ ವಿವಾದಾಸ್ಪದವಾದ ವಿಷಯ, ಯಾವುದೇ ರಾಜಕೀಯ ಪಕ್ಷ ಪ್ರಣಾಳಿಕೆ ಆಗುವುದು ಸಹನೀಯ ಸಂಗತಿಯಲ್ಲ.
ಪ್ರಾಯಶಃ ಈ ವಿಷಯದಲ್ಲಿ ಚುನಾವಣಾ ಆಯೋಗವೇ ಆಕ್ಷೇಪ ಎತ್ತಬೇಕು; ಅಥವಾ, ನ್ಯಾಯಾಂಗವೇ ಮಧ್ಯ ಪ್ರವೇಶಿಸಿ, ರಾಮನ ಗುಡಿಯಂಥ ವಿವಾದಾಸ್ಪದ ವಿಷಯವನ್ನು, ಯಾವ ರಾಜಕೀಯ ಪಕ್ಷವೂ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಬಾರದೆಂದು, ಸೂಕ್ತ ಆದೇಶ ನೀಡುವುದೇ ಸಾಕಷ್ಟು ಪರಿಣಾಮಕಾರಿ ನಿಲುವು ಎಂದೆನಿಸುತ್ತದೆ.
-ಡಾ. ಮ. ನ. ಜವರಯ್ಯ, ಮೈಸೂರು.