<p>ಬಂಡೀಪುರದಲ್ಲಿ ಇತ್ತೀಚೆಗೆ ಸಂಭವಿಸಿದ ಎರಡು ಹುಲಿಗಳ ಮರಣದ ಬಗ್ಗೆ ತಲೆದೋರಿರುವ ಅನುಮಾನಗಳು ಅಭಯಾರಣ್ಯಗಳ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತವೆ. <br /> <br /> ಅಭಯಾರಣ್ಯಗಳು ಇಂದು ವಿದೇಶಿ ಕಳೆಗಳಾದ ಲಂಟಾನ, ಯುಪಟೋರಿಯಂ, ಪಾರ್ಥೇನಿಯಂಗಳಿಂದ ತುಂಬಿಹೋಗಿವೆ. ಸಸ್ಯಾಹಾರಿ ಪ್ರಾಣಿಗಳು (ಆನೆಗಳು) ಮೇವು ಹುಡುಕಿಕೊಂಡು ಜಮೀನುಗಳಿಗೆ ಲಗ್ಗೆಯಿಡುತ್ತಿವೆ; ಬೇಟೆ ಪ್ರಾಣಿಗಳೂ ಕೂಡ ಹುಲ್ಲಿನ ಕೊರತೆಯಿಂದ ಕಡಿಮೆಯಾಗುತ್ತಿವೆ. <br /> <br /> ಇದೇ `ಮನುಷ್ಯ-ಪ್ರಾಣಿಗಳ ಘರ್ಷಣೆ~. ಇದರ ಉಪಶಮನವೇ ವನ್ಯಜೀವಿ ಸಂರಕ್ಷಣೆ ಎಂಬಂತೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಬೇಟೆ ಪ್ರಾಣಿಗಳು ಕಡಿಮೆಯಾಗಿವೆ. <br /> <br /> ಪ್ರಾಣಿಗಳು ವಿಹರಿಸಲು ಜಾಗವಿಲ್ಲದಾಗಿದೆ. ಇವಕ್ಕೆಲ್ಲ ದಟ್ಟವಾಗಿ ಹಬ್ಬಿರುವ ವಿದೇಶಿ ಕಳೆಗಳೇ ಕಾರಣ. ಇವನ್ನು ಕಿತ್ತು, ಕತ್ತರಿಸಿ, ಸುಟ್ಟು ಅರಣ್ಯ ಭೂಮಿಯನ್ನು ಬಿಡುಗಡೆಗೊಳಿಸಿ ನೈಸರ್ಗಿಕ ಹುಲ್ಲು ಬೆಳೆಯಲು ಅವಕಾಶ ಮಾಡಿ ಕೊಡುವುದು ಇಂದು ಅತ್ಯವಶ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಂಡೀಪುರದಲ್ಲಿ ಇತ್ತೀಚೆಗೆ ಸಂಭವಿಸಿದ ಎರಡು ಹುಲಿಗಳ ಮರಣದ ಬಗ್ಗೆ ತಲೆದೋರಿರುವ ಅನುಮಾನಗಳು ಅಭಯಾರಣ್ಯಗಳ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತವೆ. <br /> <br /> ಅಭಯಾರಣ್ಯಗಳು ಇಂದು ವಿದೇಶಿ ಕಳೆಗಳಾದ ಲಂಟಾನ, ಯುಪಟೋರಿಯಂ, ಪಾರ್ಥೇನಿಯಂಗಳಿಂದ ತುಂಬಿಹೋಗಿವೆ. ಸಸ್ಯಾಹಾರಿ ಪ್ರಾಣಿಗಳು (ಆನೆಗಳು) ಮೇವು ಹುಡುಕಿಕೊಂಡು ಜಮೀನುಗಳಿಗೆ ಲಗ್ಗೆಯಿಡುತ್ತಿವೆ; ಬೇಟೆ ಪ್ರಾಣಿಗಳೂ ಕೂಡ ಹುಲ್ಲಿನ ಕೊರತೆಯಿಂದ ಕಡಿಮೆಯಾಗುತ್ತಿವೆ. <br /> <br /> ಇದೇ `ಮನುಷ್ಯ-ಪ್ರಾಣಿಗಳ ಘರ್ಷಣೆ~. ಇದರ ಉಪಶಮನವೇ ವನ್ಯಜೀವಿ ಸಂರಕ್ಷಣೆ ಎಂಬಂತೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಬೇಟೆ ಪ್ರಾಣಿಗಳು ಕಡಿಮೆಯಾಗಿವೆ. <br /> <br /> ಪ್ರಾಣಿಗಳು ವಿಹರಿಸಲು ಜಾಗವಿಲ್ಲದಾಗಿದೆ. ಇವಕ್ಕೆಲ್ಲ ದಟ್ಟವಾಗಿ ಹಬ್ಬಿರುವ ವಿದೇಶಿ ಕಳೆಗಳೇ ಕಾರಣ. ಇವನ್ನು ಕಿತ್ತು, ಕತ್ತರಿಸಿ, ಸುಟ್ಟು ಅರಣ್ಯ ಭೂಮಿಯನ್ನು ಬಿಡುಗಡೆಗೊಳಿಸಿ ನೈಸರ್ಗಿಕ ಹುಲ್ಲು ಬೆಳೆಯಲು ಅವಕಾಶ ಮಾಡಿ ಕೊಡುವುದು ಇಂದು ಅತ್ಯವಶ್ಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>