ಮಳೆ ಕಡಿಮೆಯಾಗಿ, ಅಂತರ್ಜಲವೂ ಬರಿದಾಗುತ್ತಿರುವ ಈ ಹೊತ್ತಿನಲ್ಲಿ, ಕೃಷಿಯನ್ನು ಪರ್ಯಾಯ ಮಾರ್ಗದತ್ತ ಡೊಯ್ಯಬೇಕಾಗಿದೆ. ಕೃಷಿಯು ಇನ್ನು ಮುಂದೆ ನೀರಿನ ಮಿತ ಬಳಕೆ ಹಾಗೂ ಮಳೆನೀರಿನ ಸಂರಕ್ಷಣೆಯಲ್ಲಿ ಸಾಗಬೇಕಾದ ಅನಿವಾರ್ಯ ಸ್ಥಿತಿ ಇದೆ. ಇದಕ್ಕೆ ಬೇಕಾದ ತಂತ್ರಜ್ಞಾನ, ನೆರವು, ಮಾರ್ಗದರ್ಶನ ಹಾಗೂ ಉತ್ತೇಜನ ಸರ್ಕಾರದಿಂದ ಸಿಗಬೇಕು. ಹಸಿರುಕ್ರಾಂತಿಯ ಹೆಸರಿನಲ್ಲಿ ರಸಗೊಬ್ಬರ, ರಾಸಾಯನಿಕಗಳನ್ನು ರೈತನ ಮೇಲೆ ಹೇರಿದ್ದರಿಂದ ಆದ ಅನಾಹುತಗಳಿಂದ ಆತನನ್ನು ಪಾರು ಮಾಡಿ, ಸುಸ್ಥಿರ ಕೃಷಿಯತ್ತ ಹೊರಳಿಸಬೇಕಾದ ಹೊಣೆಗಾರಿಕೆಯೂ ಸರ್ಕಾರದ ಮೇಲಿದೆ.