<p>ಶಿವಮೊಗ್ಗ- ಮೈಸೂರು ಪ್ಯಾಸೆಂಜರ್ ರೈಲು ಶಿವಮೊಗ್ಗವನ್ನು ಬೆಳಿಗ್ಗೆ 7-30ಕ್ಕೆ ಬಿಟ್ಟು ಬೀರೂರಿಗೆ 9ಕ್ಕೆ ತಲುಪುತ್ತದೆ. ಈ ರೈಲನ್ನು ಸಿದ್ದಗಂಗಾ ಇಂಟರ್ ಸಿಟಿ ರೈಲಿಗೆ ಸಂಪರ್ಕ ಪ್ಯಾಸೆಂಜರ್ ರೈಲಾಗಿ ಈ ಹಿಂದೆ ಶಿವಮೊಗ್ಗವನ್ನು 8-10ಕ್ಕೆ ಬಿಡುತ್ತಿದ್ದ ಪ್ಯಾಸೆಂಜರ್ ರೈಲಿನ ಬದಲಾಗಿ ಬಿಡಲಾಗಿದೆ.<br /> <br /> ಆದರೆ ಈ 7-30ರ ಸಮಯ ಮಲೆನಾಡಿನ ಭಾಗವಾದ ತೀರ್ಥಹಳ್ಳಿ ಹೊಸನಗರ, ಸಾಗರ, ಸೊರಬ, ಶಿಕಾರಿಪುರ ಮುಂತಾದ ಕಡೆಗಳಿಂದ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಬಂದು ತಲುಪಲು ಕಷ್ಟವಾಗಿದೆ. ಈ ಹಿಂದೆ ಇದೇ ಪ್ಯಾಸೆಂಜರ್ ರೈಲು ಬೆಳಿಗ್ಗೆ 8-10ಕ್ಕೆ ಶಿವಮೊಗ್ಗ ಬಿಟ್ಟು ಬೀರೂರು ತಲುಪಿ ಅಲ್ಲಿಂದ ಸಿದ್ದಗಂಗಾ ಇಂಟರ್ಸಿಟಿಯಲ್ಲಿ ಬೆಂಗಳೂರು ತಲುಪಲು ಅನುಕೂಲವಾಗುತ್ತಿತ್ತು.<br /> <br /> ಆದರೆ ಈಗಿನ ಪ್ಯಾಸೆಂಜರ್ ರೈಲು 7-30ಕ್ಕೆ ಶಿವಮೊಗ್ಗ ಬಿಡುವುದರಿಂದ ಮಲೆನಾಡಿನ ಭಾಗದಿಂದ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಬಂದು ಸೇರಲು ಬಹಳ ಅನಾನುಕೂಲವಾಗಿದೆ. ಅಲ್ಲದೆ ಬೀರೂರಿನಲ್ಲಿ 9ಕ್ಕೆ ತಲುಪಿ ಇಂಟರ್ಸಿಟಿ ರೈಲಿಗೆ 9-45ರ ವರೆಗೆ ಕಾಯಬೇಕಾಗಿದೆ.<br /> <br /> ಆದುದರಿಂದ 7-30ಕ್ಕೆ ಬಿಡುವ ಪ್ಯಾಸೆಂಜರ್ ರೈಲನ್ನು ಬೆಳಿಗ್ಗೆ 8ಕ್ಕೆ ಶಿವಮೊಗ್ಗವನ್ನು ಬಿಟ್ಟು ಬೀರೂರು 9-15ಕ್ಕೆ ತಲುಪುವಂತೆ ಮಾಡಿದರೆ ಮಲೆನಾಡಿನ ಭಾಗದ ಜನರಿಗೆ ಬಹಳ ಅನುಕೂಲವಾಗುತ್ತದೆ.<br /> <br /> ಹಾಗೆಯೇ ಸಂಜೆ ಬೆಂಗಳೂರಿನಿಂದ ಬೀರೂರಿಗೆ 4-20ಕ್ಕೆ ಬರುವ ಸಿದ್ದಗಂಗಾ ಇಂಟರ್ಸಿಟಿ ರೈಲಿನಲ್ಲಿ ಬಂದ ಪ್ರಯಾಣಿಕರು ಇದೇ ಪ್ಯಾಸೆಂಜರ್ ರೈಲಿಗೆ ಸಂಜೆ 6 ಗಂಟೆವರೆಗೆ ಬೀರೂರಿನಲ್ಲಿ ಕಾಯಬೇಕಾಗಿದೆ. ವಯೋವೃದ್ಧರು, ಮಹಿಳೆಯರು ಬೀರೂರಿನಲ್ಲಿ 4-20 ರಿಂದ 6ರ ವರೆಗೆ ಅನಿವಾರ್ಯವಾಗಿ ಕಾಯಬೇಕಾದ ಪರಿಸ್ಥಿತಿ ಯಿಂದಾಗಿ ಶಿವಮೊಗ್ಗದಿಂದ ಮಲೆನಾಡಿನ ಭಾಗಕ್ಕೆ ಹೋಗುವ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ.<br /> <br /> ಆದುದರಿಂದ ದಯಮಾಡಿ ಸಂಜೆಯ ಪ್ಯಾಸೆಂಜರ್ ರೈಲು ಬೀರೂರನ್ನು ಸಂಜೆ 5 ಗಂಟೆಗೆ ಹೊರಡುವಂತೆ ಸಮಯವನ್ನು ಬದಲಾಯಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕಾಗಿ ಕೋರಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ- ಮೈಸೂರು ಪ್ಯಾಸೆಂಜರ್ ರೈಲು ಶಿವಮೊಗ್ಗವನ್ನು ಬೆಳಿಗ್ಗೆ 7-30ಕ್ಕೆ ಬಿಟ್ಟು ಬೀರೂರಿಗೆ 9ಕ್ಕೆ ತಲುಪುತ್ತದೆ. ಈ ರೈಲನ್ನು ಸಿದ್ದಗಂಗಾ ಇಂಟರ್ ಸಿಟಿ ರೈಲಿಗೆ ಸಂಪರ್ಕ ಪ್ಯಾಸೆಂಜರ್ ರೈಲಾಗಿ ಈ ಹಿಂದೆ ಶಿವಮೊಗ್ಗವನ್ನು 8-10ಕ್ಕೆ ಬಿಡುತ್ತಿದ್ದ ಪ್ಯಾಸೆಂಜರ್ ರೈಲಿನ ಬದಲಾಗಿ ಬಿಡಲಾಗಿದೆ.<br /> <br /> ಆದರೆ ಈ 7-30ರ ಸಮಯ ಮಲೆನಾಡಿನ ಭಾಗವಾದ ತೀರ್ಥಹಳ್ಳಿ ಹೊಸನಗರ, ಸಾಗರ, ಸೊರಬ, ಶಿಕಾರಿಪುರ ಮುಂತಾದ ಕಡೆಗಳಿಂದ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಬಂದು ತಲುಪಲು ಕಷ್ಟವಾಗಿದೆ. ಈ ಹಿಂದೆ ಇದೇ ಪ್ಯಾಸೆಂಜರ್ ರೈಲು ಬೆಳಿಗ್ಗೆ 8-10ಕ್ಕೆ ಶಿವಮೊಗ್ಗ ಬಿಟ್ಟು ಬೀರೂರು ತಲುಪಿ ಅಲ್ಲಿಂದ ಸಿದ್ದಗಂಗಾ ಇಂಟರ್ಸಿಟಿಯಲ್ಲಿ ಬೆಂಗಳೂರು ತಲುಪಲು ಅನುಕೂಲವಾಗುತ್ತಿತ್ತು.<br /> <br /> ಆದರೆ ಈಗಿನ ಪ್ಯಾಸೆಂಜರ್ ರೈಲು 7-30ಕ್ಕೆ ಶಿವಮೊಗ್ಗ ಬಿಡುವುದರಿಂದ ಮಲೆನಾಡಿನ ಭಾಗದಿಂದ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಬಂದು ಸೇರಲು ಬಹಳ ಅನಾನುಕೂಲವಾಗಿದೆ. ಅಲ್ಲದೆ ಬೀರೂರಿನಲ್ಲಿ 9ಕ್ಕೆ ತಲುಪಿ ಇಂಟರ್ಸಿಟಿ ರೈಲಿಗೆ 9-45ರ ವರೆಗೆ ಕಾಯಬೇಕಾಗಿದೆ.<br /> <br /> ಆದುದರಿಂದ 7-30ಕ್ಕೆ ಬಿಡುವ ಪ್ಯಾಸೆಂಜರ್ ರೈಲನ್ನು ಬೆಳಿಗ್ಗೆ 8ಕ್ಕೆ ಶಿವಮೊಗ್ಗವನ್ನು ಬಿಟ್ಟು ಬೀರೂರು 9-15ಕ್ಕೆ ತಲುಪುವಂತೆ ಮಾಡಿದರೆ ಮಲೆನಾಡಿನ ಭಾಗದ ಜನರಿಗೆ ಬಹಳ ಅನುಕೂಲವಾಗುತ್ತದೆ.<br /> <br /> ಹಾಗೆಯೇ ಸಂಜೆ ಬೆಂಗಳೂರಿನಿಂದ ಬೀರೂರಿಗೆ 4-20ಕ್ಕೆ ಬರುವ ಸಿದ್ದಗಂಗಾ ಇಂಟರ್ಸಿಟಿ ರೈಲಿನಲ್ಲಿ ಬಂದ ಪ್ರಯಾಣಿಕರು ಇದೇ ಪ್ಯಾಸೆಂಜರ್ ರೈಲಿಗೆ ಸಂಜೆ 6 ಗಂಟೆವರೆಗೆ ಬೀರೂರಿನಲ್ಲಿ ಕಾಯಬೇಕಾಗಿದೆ. ವಯೋವೃದ್ಧರು, ಮಹಿಳೆಯರು ಬೀರೂರಿನಲ್ಲಿ 4-20 ರಿಂದ 6ರ ವರೆಗೆ ಅನಿವಾರ್ಯವಾಗಿ ಕಾಯಬೇಕಾದ ಪರಿಸ್ಥಿತಿ ಯಿಂದಾಗಿ ಶಿವಮೊಗ್ಗದಿಂದ ಮಲೆನಾಡಿನ ಭಾಗಕ್ಕೆ ಹೋಗುವ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿದೆ.<br /> <br /> ಆದುದರಿಂದ ದಯಮಾಡಿ ಸಂಜೆಯ ಪ್ಯಾಸೆಂಜರ್ ರೈಲು ಬೀರೂರನ್ನು ಸಂಜೆ 5 ಗಂಟೆಗೆ ಹೊರಡುವಂತೆ ಸಮಯವನ್ನು ಬದಲಾಯಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕಾಗಿ ಕೋರಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>