‘ಅನ್ಯಾಯವೇ ಕಾನೂನಾದರೆ, ಬಂಡಾಯವೇ ಕರ್ತವ್ಯವಾಗುತ್ತದೆ’ ಎಂಬ ಸಾಲನ್ನು ತಮ್ಮ ಫೇಸ್ಬುಕ್ ಸ್ಟೇಟಸ್ ವಾಲ್ಗೆ ಹಾಕಿರುವ ದಕ್ಷ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ, ಸ್ವತಃ ಅದೇ ಕೆಲಸವನ್ನು ಮಾಡಿದ್ದಾರೆ. ಆದರೆ ಅವರ ಬಂಡಾಯವನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆ ಸರ್ಕಾರಕ್ಕೆ ಇಲ್ಲವಾಗಿದೆ.
ಅನುಪಮಾ ಅವರ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯದು. ಅವರಂತಹವರ ಸೇವೆ ಸಮಾಜಕ್ಕೆ ಅತಿ ಅವಶ್ಯ. ಗ್ರಾಮೀಣ ಭಾಷೆಯಲ್ಲಿ ಹೇಳುವ ಹಾಗೆ, ಮೋಟು ಮರವಾಗಿ ಸೇವೆ ಮುಂದುವರಿಸಬೇಕು. ಅವರ ಜೊತೆಗೆ ಸಾವಿರಾರು ಒಳ್ಳೆಯ ಮನಸ್ಸುಗಳಿವೆ. ಉತ್ತಮ ಸೇವೆ ಅವರಂಥ ಪ್ರಾಮಾಣಿಕ ಅಧಿಕಾರಿಗಳಿಂದ ಸಾಧ್ಯ.