ಅಶೋಕನಗರ ವ್ಯಾಪ್ತಿಯ ವಿದ್ಯಾಪೀಠ ವಾರ್ಡಿನ ಸಂಖ್ಯೆ 164 ಹನುಮಂತ ನಗರ ಪೊಲೀಸ್ ಠಾಣೆ ಎದುರುಗಡೆ
ಇರುವ ಶ್ರೀನಿಕೆತನ ಬ್ಯೂಟಿ ಪಾರ್ಲರ್ ಎದುರು ಒಳಚರಂಡಿ ಮಂಡಳಿ ಯವರು ಡ್ರೈನೇಜ್ ರಿಪೇರಿಗಾಗಿ ಹೊಂಡ ತೋಡಿದ್ದಾರೆ. ಹತ್ತು ದಿನಗಳೇ ಕಳೆದರೂ ಅದನ್ನು ಮುಚ್ಚಿಲ್ಲ. ರಿಪೇರಿಯೂ ಆಗಿಲ್ಲ.
ಆ ಹೊಂಡದೊಳಗೆ ಡ್ರೈನೇಜ್ ನೀರು ತುಂಬಿ ಸೊಳ್ಳೆಗಳ ವಾಸಸ್ಥಾನ ಆಗಿದೆ. ಅಕ್ಕ ಪಕ್ಕದ ಮನೆಯವರಿಗೂ ಇದರಿಂದ ತೊಂದರೆ ಅನುಭವಿಸುವಂತಾಗಿದೆ. ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿ.