ಸಚಿವರು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ‘ಭೋಜನಕೂಟ’ ಏರ್ಪಡಿಸುತ್ತಿರುವುದು ವರದಿಯಾಗಿದೆ. ಇದು ಯಾವ ಪುರುಷಾರ್ಥಕ್ಕೆಂದು ತಿಳಿಯಲಿಲ್ಲ!
ಹಿಂದೆ ‘ಅನ್ನದಾನ’ವೆಂದು ಕರೆದು ಮದುವೆ, ಜಾತ್ರೆ ಮುಂತಾದ ನೆಪಗಳಿಂದ ಉಳ್ಳವರು ಊರಿಗೆಲ್ಲ ಊಟ ಹಾಕಿಸುತ್ತಿದ್ದರು. ಅಕ್ಷರಶಃ ಹಸಿದ ಮಂದಿ ಉಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ತಿಂದ ‘ಆಹಾರ’ ಜೀರ್ಣದ್ದೆ ಸಮಸ್ಯೆಯಾಗಿರುವ ಶಾಸಕ–ಸಚಿವರುಗಳಿಗೆ ಇಂತಹ ‘ಭೋಜನ ಕೂಟ’ಗಳು ಬೇಕೆ?!