ಬೆಂಗಳೂರು:ಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬರಾದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ (84) ಅವರುಶನಿವಾರಬೆಳಗ್ಗೆ ನಿಧನರಾದರು. ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ವೇಳೆ ಸೆರೆಸಿಕ್ಕ ಚಿತ್ರಗಳು ಇಲ್ಲಿವೆ.
ಲೇಖಕ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ, ಸಾಹಿತಿ ಎಚ್.ಎಸ್.ವೆಂಕಟೇಶ ಮೂರ್ತಿ, ಲೇಖಕ ಡಾ.ನಾ ದಾಮೋದರ ಶೆಟ್ಟಿ ಮತ್ತು ವಿಮರ್ಶಕ ಎಚ್.ಎಸ್ ಸತ್ಯನಾರಾಯಣ ಮಾತುಕತೆಯಲ್ಲಿ ತೊಡಗಿದ್ದರು-ಪ್ರಜಾವಾಣಿ ಚಿತ್ರ
ADVERTISEMENT
ಸಾಹಿತಿ ಎಚ್.ಎಸ್.ವೆಂಕಟೇಶ ಮೂರ್ತಿ (ಎಡದಿಂದ ಮೂರನೇಯವರು), ಪತ್ರಕರ್ತ ಶ್ರೀಧರ್ ಮೂರ್ತಿ ಮತ್ತು ಲೇಖಕ ಡಾ.ನಾ ದಾಮೋದರ ಶೆಟ್ಟಿ ಅವರೊಂದಿಗೆ ಲೇಖಕ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ (ಎಡದಿಂದ ಎರಡನೇಯವರು).
ಕಾರ್ಯಕ್ರಮವೊಂದರಲ್ಲಿ (ಎಡದಿಂದ) ಗಾಯಕ ವೈ.ಕೆ ಮುದ್ದುಕೃಷ್ಣ, ಗೋಪಾಲಕೃಷ್ಣ ಅಡಿಗರ ಮಗ ಪ್ರದ್ಯುಮ್ನ ಅಡಿಗ, ಕವಿ ಡಾ. ಸುಮತೀಂದ್ರ ನಾಡಿಗ್, ಕವಿ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟ ಮತ್ತು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಮಣ್ಯ -ಪ್ರಜಾವಾಣಿ ಚಿತ್ರ
ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಸೋಮಶೇಖರ ಇಮ್ರಾಪುರ, ಬನ್ನಂಜೆ ಗೋವಿಂದಾಚಾರ್ಯ, ಕಸ್ತೂರಿ ಬಾಯರಿ, ಲಕ್ಷ್ಮೀನಾರಾಯಣ ಭಟ್ಟ ಹಾಗೂ ಪ್ರೊ. ಎಚ್. ಜೆ. ಲಕ್ಕಪ್ಪಗೌಡ ಅವರಿಗೆ 2017ನೇ ವರ್ಷದ ಗೌರವ ಪ್ರಶಸ್ತಿ ನೀಡಿ ಗೌರವಿಲಾಯಿತು. ಡಾ. ಅರವಿಂದ ಮಾಲಗತ್ತಿ, ಸಚಿವೆ ಉಮಾಶ್ರೀ, ಮನು ಬಳಿಗಾರ್ ಹಾಗೂ ಎನ್.ಆರ್. ವಿಶುಕುಮಾರ್ ಇದ್ದಾರೆ –ಪ್ರಜಾವಾಣಿ ಚಿತ್ರ
ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಕಲಾವಿದ ವೈ.ಕೆ.ಮುದ್ದುಕೃಷ್ಣ ಅವರಿಗೆ ಕೆ.ಎಸ್.ನ ಕಾವ್ಯ ಗಾಯನ ಪ್ರಶಸ್ತಿ ಮತ್ತು ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ಕೆ.ಎಸ್.ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.