ಬಳ್ಳಾರಿ: ಬೆಂಗಳೂರಿನ ಮತದಾರರಾಗಿರುವ ಇಲ್ಲಿನ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿ.ಎಸ್.ಉಗ್ರಪ್ಪ, ಗುರುವಾರ ಮತ ಚಲಾಯಿಸದೇ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡ ಸಂಗತಿಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ದಾರಿ ಮಾಡುತ್ತಿದೆ.
ಅವರು ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆಯ ಮತದಾರರಾಗಿದ್ದು, ಗುರುವಾರ ಮತಚಲಾಯಿಸಬೇಕಿತ್ತು.
ನೋವಿದೆ: ಈ ಬಗ್ಗೆ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಉಗ್ರಪ್ಪ, ‘ಮತ ಚಲಾಯಿಸದೇ ಇರುವ ಬಗ್ಗೆ ನೋವಿದೆ. ನಾನೇ ಯುದ್ಧರಂಗದಲ್ಲಿರುವುದರಿಂದ ಬೆಂಗಳೂರಿಗೆ ಹೋಗಲು ಆಗಲಿಲ್ಲ’ ಎಂದು ಹೇಳಿದರು.