<p><strong>ಹುಬ್ಬಳ್ಳಿ: </strong>ಜೂನಿಯರ್ ಪ್ರತಿಭೆಗಳ ಸಾಮರ್ಥ್ಯಕ್ಕೆ ವೇದಿಕೆ ಎನಿಸಿರುವ ಹುಬ್ಬಳ್ಳಿ ಪ್ರೀಮಿಯರ್ ಲೀಗ್ (ಎಚ್ ಪಿಎಲ್) ಕ್ರಿಕೆಟ್ ಟೂರ್ನಿಯ ಮೂರನೇ ಆವೃತ್ತಿ ಶನಿವಾರ ಆರಂಭವಾಗಲಿದೆ.</p>.<p>ಹುಬ್ಬಳ್ಳಿ ನೈಟ್ಸ್, ಸ್ವರ್ಣ ಸ್ಟ್ರೈಕರ್ಸ್, ಮುಂಡಗೋಡ ಮಾನ್ಸ್ಟರ್ಸ್, ಸ್ಕೈಟೌನ್ ಬ್ಯಾಷರ್ಸ್, ಎನ್.ಕೆ. ವಾರಿಯರ್ಸ್, ನಿಲೇಕಣಿ ಚಾಲೆಂಜರ್ಸ್, ಟಿ.ಎಸ್.ಎಸ್. ಟೈಗರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡಗಳು ಪಾಲ್ಗೊಳ್ಳಲಿವೆ.</p>.<p>ಪಂದ್ಯಗಳು ರಾಜನಗರ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ. ಜ. 21ರಂದು ಫೈನಲ್ ಜರುಗಲಿದೆ. ಮೊದಲ ಬಾರಿಗೆ ಹೊನಲು ಬೆಳಕಿನಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ.</p>.<p>ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಆಡಿದ್ದ ಪ್ರಮುಖ ಆಟಗಾರರು ಮತ್ತು ರಣಜಿ ಟೂರ್ನಿ ಆಟಗಾರ ವೇಗಿ ಎಚ್.ಎಸ್. ಶರತ್ ಕೂಡ ಆಡಲಿದ್ದಾರೆ.</p>.<p>‘ಹಿಂದಿನ ಎರಡು ವರ್ಷ ಚೆನ್ನಾಗಿ ಆಡಿದ ಆಟಗಾರರು ಕೆಪಿಎಲ್ನಲ್ಲಿ ಅವಕಾಶ ಪಡೆದರು. ಬೆಂಗಳೂರಿನ ಆಟಗಾರರು ಕೂಡ ಹುಬ್ಬಳ್ಳಿಗೆ ಬಂದು ಆಡುವುದರಿಂದ ಈ ಭಾಗದಲ್ಲಿ ಕ್ರಿಕೆಟ್ ಬೆಳವಣಿಗೆ ವೇಗ ಹೆಚ್ಚಾಗುತ್ತದೆ’ ಎಂದು ಟೂರ್ನಿ ಆಯೋಜಿಸಿರುವ ಬಿ.ಡಿ.ಕೆ. ಸ್ಪೋರ್ಟ್ಸ್ ಫೌಂಡೇಷನ್ ಸದಸ್ಯ ಶಿವಾ ನಂದ ಗುಂಜಾಳ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಜೂನಿಯರ್ ಪ್ರತಿಭೆಗಳ ಸಾಮರ್ಥ್ಯಕ್ಕೆ ವೇದಿಕೆ ಎನಿಸಿರುವ ಹುಬ್ಬಳ್ಳಿ ಪ್ರೀಮಿಯರ್ ಲೀಗ್ (ಎಚ್ ಪಿಎಲ್) ಕ್ರಿಕೆಟ್ ಟೂರ್ನಿಯ ಮೂರನೇ ಆವೃತ್ತಿ ಶನಿವಾರ ಆರಂಭವಾಗಲಿದೆ.</p>.<p>ಹುಬ್ಬಳ್ಳಿ ನೈಟ್ಸ್, ಸ್ವರ್ಣ ಸ್ಟ್ರೈಕರ್ಸ್, ಮುಂಡಗೋಡ ಮಾನ್ಸ್ಟರ್ಸ್, ಸ್ಕೈಟೌನ್ ಬ್ಯಾಷರ್ಸ್, ಎನ್.ಕೆ. ವಾರಿಯರ್ಸ್, ನಿಲೇಕಣಿ ಚಾಲೆಂಜರ್ಸ್, ಟಿ.ಎಸ್.ಎಸ್. ಟೈಗರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡಗಳು ಪಾಲ್ಗೊಳ್ಳಲಿವೆ.</p>.<p>ಪಂದ್ಯಗಳು ರಾಜನಗರ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ. ಜ. 21ರಂದು ಫೈನಲ್ ಜರುಗಲಿದೆ. ಮೊದಲ ಬಾರಿಗೆ ಹೊನಲು ಬೆಳಕಿನಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ.</p>.<p>ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಆಡಿದ್ದ ಪ್ರಮುಖ ಆಟಗಾರರು ಮತ್ತು ರಣಜಿ ಟೂರ್ನಿ ಆಟಗಾರ ವೇಗಿ ಎಚ್.ಎಸ್. ಶರತ್ ಕೂಡ ಆಡಲಿದ್ದಾರೆ.</p>.<p>‘ಹಿಂದಿನ ಎರಡು ವರ್ಷ ಚೆನ್ನಾಗಿ ಆಡಿದ ಆಟಗಾರರು ಕೆಪಿಎಲ್ನಲ್ಲಿ ಅವಕಾಶ ಪಡೆದರು. ಬೆಂಗಳೂರಿನ ಆಟಗಾರರು ಕೂಡ ಹುಬ್ಬಳ್ಳಿಗೆ ಬಂದು ಆಡುವುದರಿಂದ ಈ ಭಾಗದಲ್ಲಿ ಕ್ರಿಕೆಟ್ ಬೆಳವಣಿಗೆ ವೇಗ ಹೆಚ್ಚಾಗುತ್ತದೆ’ ಎಂದು ಟೂರ್ನಿ ಆಯೋಜಿಸಿರುವ ಬಿ.ಡಿ.ಕೆ. ಸ್ಪೋರ್ಟ್ಸ್ ಫೌಂಡೇಷನ್ ಸದಸ್ಯ ಶಿವಾ ನಂದ ಗುಂಜಾಳ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>