‘ನಾನು ಆಡುವ ಸಂದರ್ಭದಲ್ಲಿ ತಂಡದಲ್ಲಿ ಪ್ರಾದೇಶಿಕತೆ ಮತ್ತು ಧರ್ಮದ ಬಗ್ಗೆ ಮಾತನಾಡಿದ ಇಬ್ಬರು, ಮೂವರೊಂದಿಗೆ ಜಗಳ ಮಾಡಿದ್ದೆ. ಕರಾಚಿ, ಪಂಜಾಬ್ ಅಥವಾ ಪೇಶಾವರ್ ಗಳಿಂದ ಬಂದವರನ್ನು ಕೀಳಾಗಿ ಕಾಣಲಾಗುತ್ತಿತ್ತು. ಹಿಂದು ಅಗಿರಲೀ. ಯಾರೇ ಆಗಿರಲಿ ಉತ್ತಮವಾಗಿ ಆಡಿ ತಂಡಕ್ಕೆ ಕಾಣಿಕೆ ನೀಡುವುದು ಮುಖ್ಯ. ಕನೇರಿಯಾ ಉತ್ತಮವಾಗಿ ಆಡುತ್ತಿದ್ದರು’ ಎಂದು ವೇಗಿ ಶೋಯಬ್ ಹೇಳಿದರು.