ಢಾಕಾ : ಕೋಲ್ಕತ್ತದಲ್ಲಿ ಕಾಳಿ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿದ್ದ ಕಾರಣಕ್ಕೆ ತಮಗೆ ಬಂದ ಬೆದರಿಕೆಗಳಿಗೆ ಮಣಿದ ಬಾಂಗ್ಲಾದೇಶ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಸೋಮವಾರ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ.
ತಾವು ಕೇವಲ ಕಾರ್ಯಕ್ರಮಕ್ಕೆ ಹಾಜರಾಗಿದ್ದಾಗಿ, ತಪ್ಪಾಗಿದ್ದರೆ ಕ್ಷಮಿಸಬೇಕು ಎಂದು ಶಕೀಬ್ ಅಲ್ ಹಸನ್ ಹೇಳಿಕೆ ನೀಡಿದ್ದಾರೆ.
ಅವರಿಗೆ ಬೆದರಿಕೆ ಹಾಕಿದ್ದನೆನ್ನಲಾದ 28 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
’ಸುನಾಮಗಂಜ್ ಜಿಲ್ಲೆಯ 28 ವರ್ಷದ ಮೊಹಸಿನ್ ತಾಲೂಕದಾರ್ ಬೆದರಿಕೆ ಹಾಕಿದ್ದ ಯುವಕ. ದೂರು ಸಿಕ್ಕ 24 ಗಂಟೆಗಳಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ. ನಮ್ಮ ವಶದಲ್ಲಿರುವ ಈ ಯುವಕನನ್ನು ವಿಚಾರಣೆ ನಡೆಸಲಾಗುತ್ತಿದೆ‘ ಎಂದುಪೊಲೀಸರು ತಿಳಿಸಿದ್ದಾರೆ.