<p><strong>ಬೆಂಗಳೂರು:</strong> ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20 ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಪಂಜಾಬ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ ಕ್ವಾರ್ಟರ್ಫೈನಲ್ ಪ್ರವೇಶಿಸಿತು.</p>.<p>ಅಹಮದಾಬಾದ್ನಲ್ಲಿ ನಡೆದ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಜ್ಯ ತಂಡವು ಬೌಲಿಂಗ್ ಆಯ್ದುಕೊಂಡಿತು. ಯೋಜನೆಗೆ ತಕ್ಕಂತೆ ಬೌಲಿಂಗ್ ದಾಳಿ ಮಾಡಿದ ದೀಕ್ಷಾ ಜೆ.ಎಚ್. (15ಕ್ಕೆ4) ಹಾಗೂ ನಮಿತಾ ಡಿಸೋಜಾ (5ಕ್ಕೆ2) ಅವರು ಪಂಜಾಬ್ ತಂಡದ ರನ್ ಗಳಿಕೆಗೆ ಕಡಿವಾಣ ಹಾಕಿದರು.</p>.<p>ಹಿಮಾನ್ಶಿ ಸೈನಿ (ಔಟಾಗದೇ 51) ಅವರ ಹೋರಾಟದಿಂದ ಪಂಜಾಬ್ ತಂಡವು ನಿಗದಿತ ಓವರ್ಗಳಲ್ಲಿ 9 ವಿಕೆಟ್ಗೆ 95 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ರೋಷಿನಿ ಕಿರಣ್ ಬಳಗವು ನಿಕಿ ಪ್ರಸಾದ್ (ಔಟಾಗದೇ 44) ಅವರ ತಾಳ್ಮೆಯ ಬ್ಯಾಟಿಂಗ್ ಬಲದಿಂದ 19.5 ಓವರ್ಗಳಲ್ಲಿ 96 ರನ್ ಗಳಿಸಿ, ಗೆಲುವಿನ ನಗೆ ಬೀರಿತು.</p>.<p>ಕರ್ನಾಟಕ ತಂಡವು ಭಾನುವಾರ ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ.</p>.<h2>ಸಂಕ್ಷಿಪ್ತ ಸ್ಕೋರು:</h2><p> <strong>ಪಂಜಾಬ್:</strong> 20 ಓವರ್ಗಳಲ್ಲಿ 9 ವಿಕೆಟ್ಗೆ 95 (ಹಿಮಾನ್ಶಿ ಸೈನಿ ಔಟಾಗದೇ 51; ದೀಕ್ಷಾ ಜೆ.ಎಚ್. 15ಕ್ಕೆ4, ನಮಿತಾ ಡಿಸೋಜಾ 5ಕ್ಕೆ2). </p> <p><strong>ಕರ್ನಾಟಕ:</strong> 19.5 ಓವರ್ಗಳಲ್ಲಿ 5 ವಿಕೆಟ್ಗೆ 96 (ನಿಕಿ ಪ್ರಸಾದ್ ಔಟಾಗದೇ 44; ಪ್ರಗತಿ ಸಿಂಗ್ 2ಕ್ಕೆ1, ಪ್ರಿಯಾಂಕ 12ಕ್ಕೆ1). </p> <p><strong>ಫಲಿತಾಂಶ:</strong> ಕರ್ನಾಟಕ ತಂಡಕ್ಕೆ 5 ವಿಕೆಟ್ ಜಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಟಿ20 ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಪಂಜಾಬ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ ಕ್ವಾರ್ಟರ್ಫೈನಲ್ ಪ್ರವೇಶಿಸಿತು.</p>.<p>ಅಹಮದಾಬಾದ್ನಲ್ಲಿ ನಡೆದ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ರಾಜ್ಯ ತಂಡವು ಬೌಲಿಂಗ್ ಆಯ್ದುಕೊಂಡಿತು. ಯೋಜನೆಗೆ ತಕ್ಕಂತೆ ಬೌಲಿಂಗ್ ದಾಳಿ ಮಾಡಿದ ದೀಕ್ಷಾ ಜೆ.ಎಚ್. (15ಕ್ಕೆ4) ಹಾಗೂ ನಮಿತಾ ಡಿಸೋಜಾ (5ಕ್ಕೆ2) ಅವರು ಪಂಜಾಬ್ ತಂಡದ ರನ್ ಗಳಿಕೆಗೆ ಕಡಿವಾಣ ಹಾಕಿದರು.</p>.<p>ಹಿಮಾನ್ಶಿ ಸೈನಿ (ಔಟಾಗದೇ 51) ಅವರ ಹೋರಾಟದಿಂದ ಪಂಜಾಬ್ ತಂಡವು ನಿಗದಿತ ಓವರ್ಗಳಲ್ಲಿ 9 ವಿಕೆಟ್ಗೆ 95 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ರೋಷಿನಿ ಕಿರಣ್ ಬಳಗವು ನಿಕಿ ಪ್ರಸಾದ್ (ಔಟಾಗದೇ 44) ಅವರ ತಾಳ್ಮೆಯ ಬ್ಯಾಟಿಂಗ್ ಬಲದಿಂದ 19.5 ಓವರ್ಗಳಲ್ಲಿ 96 ರನ್ ಗಳಿಸಿ, ಗೆಲುವಿನ ನಗೆ ಬೀರಿತು.</p>.<p>ಕರ್ನಾಟಕ ತಂಡವು ಭಾನುವಾರ ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ.</p>.<h2>ಸಂಕ್ಷಿಪ್ತ ಸ್ಕೋರು:</h2><p> <strong>ಪಂಜಾಬ್:</strong> 20 ಓವರ್ಗಳಲ್ಲಿ 9 ವಿಕೆಟ್ಗೆ 95 (ಹಿಮಾನ್ಶಿ ಸೈನಿ ಔಟಾಗದೇ 51; ದೀಕ್ಷಾ ಜೆ.ಎಚ್. 15ಕ್ಕೆ4, ನಮಿತಾ ಡಿಸೋಜಾ 5ಕ್ಕೆ2). </p> <p><strong>ಕರ್ನಾಟಕ:</strong> 19.5 ಓವರ್ಗಳಲ್ಲಿ 5 ವಿಕೆಟ್ಗೆ 96 (ನಿಕಿ ಪ್ರಸಾದ್ ಔಟಾಗದೇ 44; ಪ್ರಗತಿ ಸಿಂಗ್ 2ಕ್ಕೆ1, ಪ್ರಿಯಾಂಕ 12ಕ್ಕೆ1). </p> <p><strong>ಫಲಿತಾಂಶ:</strong> ಕರ್ನಾಟಕ ತಂಡಕ್ಕೆ 5 ವಿಕೆಟ್ ಜಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>