<p><strong>ಮೈಸೂರು: </strong>ಕರ್ನಾಟಕ ತಂಡದವರು ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯಲ್ಲಿ ಉತ್ತರ ಪ್ರದೇಶ ಎದುರು ಇನಿಂಗ್ಸ್ ಹಾಗೂ ಎರಡು ರನ್ಗಳ ಸೋಲು ಅನುಭವಿಸಿದರು.</p>.<p>ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ಕೊನೆಗೊಂಡ ನಾಲ್ಕು ದಿನಗಳ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕರ್ನಾಟಕ, ಎರಡನೇ ಇನಿಂಗ್ಸ್ನಲ್ಲಿ 75 ಓವರ್ಗಳಲ್ಲಿ 157 ರನ್ಗಳಿಗೆ ಆಲೌಟಾಯಿತು. ಮೊದಲ ಇನಿಂಗ್ಸ್ನಲ್ಲಿ 275 ರನ್ ಗಳಿಸಿದ್ದ ಆತಿಥೇಯ ತಂಡ ಫಾಲೋಆನ್ಗೆ ಒಳಗಾಗಿತ್ತು.</p>.<p>ಶುಕ್ರವಾರದ ಆಟದ ಅಂತ್ಯಕ್ಕೆ ಒಂದು ವಿಕೆಟ್ಗೆ 19 ರನ್ ಗಳಿಸಿದ್ದ ಕರ್ನಾಟಕ ತಂಡ ಸೋಲು ತಪ್ಪಿಸಲು ದಿನವಿಡೀ ಬ್ಯಾಟ್ ಮಾಡಬೇಕಿತ್ತು. ಆದರೆ ಶಿವ ಸಿಂಗ್ (27ಕ್ಕೆ 6) ಅವರ ಪ್ರಭಾವಿ ಬೌಲಿಂಗ್ ದಾಳಿಗೆ ತತ್ತರಿಸಿ ಸೋಲಿನ ಹಾದಿ ಹಿಡಿಯಿತು.</p>.<p>ಅಂತಿಮ ದಿನದ ಮೊದಲ ಅವಧಿಯಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ತಂಡ ಆಘಾತ ಅನುಭವಿಸಿತು. ಭೋಜನ ವಿರಾಮದ ವೇಳೆಗೆ 5 ವಿಕೆಟ್ಗೆ 85 ರನ್ ಗಳಿಸಿತ್ತು. ಚಹಾ ವಿರಾಮಕ್ಕೂ ಮುನ್ನ ಇನ್ನುಳಿದ ಐದು ವಿಕೆಟ್ಗಳನ್ನು ಕಳೆದುಕೊಂಡು ಪರಾಭವಗೊಂಡಿತು.</p>.<p>ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಉತ್ತರ ಪ್ರದೇಶ: 140 ಓವರ್ಗಳಲ್ಲಿ 434; ಕರ್ನಾಟಕ: 107.5 ಓವರ್ಗಳಲ್ಲಿ 275 ಎರಡನೇ ಇನಿಂಗ್ಸ್: ಕರ್ನಾಟಕ 75 ಓವರ್ಗಳಲ್ಲಿ 157 (ಬಿ.ಯು.ಶಿವಕುಮಾರ್ 14, ಕಿಶನ್ ಬಿದಾರೆ 20, ಲವನೀತ್ ಸಿಸೋಡಿಯಾ 38, ಮನೋಜ್ ಭಾಂಡಗೆ 40, ವಿ.ವೈಶಾಖ್ 8, ಶಿವ ಸಿಂಗ್ 27ಕ್ಕೆ 6, ಕರಣ್ ಶರ್ಮಾ 29ಕ್ಕೆ 2) ಫಲಿತಾಂಶ: ಉತ್ತರ ಪ್ರದೇಶಕ್ಕೆ ಇನಿಂಗ್ಸ್ ಹಾಗೂ 2 ರನ್ ಜಯ; 7 ಪಾಯಿಂಟ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಕರ್ನಾಟಕ ತಂಡದವರು ಸಿ.ಕೆ.ನಾಯ್ಡು ಟ್ರೋಫಿ (23 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯಲ್ಲಿ ಉತ್ತರ ಪ್ರದೇಶ ಎದುರು ಇನಿಂಗ್ಸ್ ಹಾಗೂ ಎರಡು ರನ್ಗಳ ಸೋಲು ಅನುಭವಿಸಿದರು.</p>.<p>ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ಕೊನೆಗೊಂಡ ನಾಲ್ಕು ದಿನಗಳ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕರ್ನಾಟಕ, ಎರಡನೇ ಇನಿಂಗ್ಸ್ನಲ್ಲಿ 75 ಓವರ್ಗಳಲ್ಲಿ 157 ರನ್ಗಳಿಗೆ ಆಲೌಟಾಯಿತು. ಮೊದಲ ಇನಿಂಗ್ಸ್ನಲ್ಲಿ 275 ರನ್ ಗಳಿಸಿದ್ದ ಆತಿಥೇಯ ತಂಡ ಫಾಲೋಆನ್ಗೆ ಒಳಗಾಗಿತ್ತು.</p>.<p>ಶುಕ್ರವಾರದ ಆಟದ ಅಂತ್ಯಕ್ಕೆ ಒಂದು ವಿಕೆಟ್ಗೆ 19 ರನ್ ಗಳಿಸಿದ್ದ ಕರ್ನಾಟಕ ತಂಡ ಸೋಲು ತಪ್ಪಿಸಲು ದಿನವಿಡೀ ಬ್ಯಾಟ್ ಮಾಡಬೇಕಿತ್ತು. ಆದರೆ ಶಿವ ಸಿಂಗ್ (27ಕ್ಕೆ 6) ಅವರ ಪ್ರಭಾವಿ ಬೌಲಿಂಗ್ ದಾಳಿಗೆ ತತ್ತರಿಸಿ ಸೋಲಿನ ಹಾದಿ ಹಿಡಿಯಿತು.</p>.<p>ಅಂತಿಮ ದಿನದ ಮೊದಲ ಅವಧಿಯಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ತಂಡ ಆಘಾತ ಅನುಭವಿಸಿತು. ಭೋಜನ ವಿರಾಮದ ವೇಳೆಗೆ 5 ವಿಕೆಟ್ಗೆ 85 ರನ್ ಗಳಿಸಿತ್ತು. ಚಹಾ ವಿರಾಮಕ್ಕೂ ಮುನ್ನ ಇನ್ನುಳಿದ ಐದು ವಿಕೆಟ್ಗಳನ್ನು ಕಳೆದುಕೊಂಡು ಪರಾಭವಗೊಂಡಿತು.</p>.<p>ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಉತ್ತರ ಪ್ರದೇಶ: 140 ಓವರ್ಗಳಲ್ಲಿ 434; ಕರ್ನಾಟಕ: 107.5 ಓವರ್ಗಳಲ್ಲಿ 275 ಎರಡನೇ ಇನಿಂಗ್ಸ್: ಕರ್ನಾಟಕ 75 ಓವರ್ಗಳಲ್ಲಿ 157 (ಬಿ.ಯು.ಶಿವಕುಮಾರ್ 14, ಕಿಶನ್ ಬಿದಾರೆ 20, ಲವನೀತ್ ಸಿಸೋಡಿಯಾ 38, ಮನೋಜ್ ಭಾಂಡಗೆ 40, ವಿ.ವೈಶಾಖ್ 8, ಶಿವ ಸಿಂಗ್ 27ಕ್ಕೆ 6, ಕರಣ್ ಶರ್ಮಾ 29ಕ್ಕೆ 2) ಫಲಿತಾಂಶ: ಉತ್ತರ ಪ್ರದೇಶಕ್ಕೆ ಇನಿಂಗ್ಸ್ ಹಾಗೂ 2 ರನ್ ಜಯ; 7 ಪಾಯಿಂಟ್</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>