ಬೆಂಗಳೂರು: ಕರ್ನಾಟಕ ತಂಡ, ಆಲೂರಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆದ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಬುಧವಾರ ಜಮ್ಮು ಮತ್ತು ಕಾಶ್ಮೀರ ತಂಡವನ್ನು 129 ರನ್ಗಳಿಂದ ಸೋಲಿಸಿತು.
ಕೊನೆಯ ದಿನ ಕರ್ನಾಟಕ ಪರ ಅನೀಶ್ ಕೆ.ವಿ. ಶತಕ (101, 100ಎ, 4x11, 6x2) ಬಾರಿಸಿದರೆ, ಮೆಕ್ನೀಲ್ ನೊರೊನಾ 14 ರನ್ನಿಗೆ 4 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ಕರ್ನಾಟಕ: 426, ಜಮ್ಮು ಮತ್ತು ಕಾಶ್ಮೀರ: 297
ಎರಡನೇ ಇನಿಂಗ್ಸ್: ಕರ್ನಾಟಕ: 46.2 ಓವರುಗಳಲ್ಲಿ 8 ವಿಕೆಟ್ಗೆ 238 ಡಿಕ್ಲೇರ್ (ಅನೀಶ್ ಕೆ.ವಿ. 101; ಮುಜ್ತಾಬ ಯೂಸುಫ್ 77ಕ್ಕೆ4)
ಜಮ್ಮು ಮತ್ತು ಕಾಶ್ಮೀರ: 56.5 ಓವರುಗಳಲ್ಲಿ 238 (ಖಾಜಿ ಜುನೇದ್ ಮಸೂದ್ 73, ಆರ್ಯ ಠಾಕೂರ್ 41, ಕವಲ್ ಪ್ರೀತ್ ಸಿಂಗ್ 39; ಹಾರ್ದಿಕ್ ರಾಜ್ 84ಕ್ಕೆ3, ಧೀರಜ್ ಗೌಡ 74ಕ್ಕೆ2, ಮೆಕ್ನೀಲ್ ಹೆಡ್ಲಿ ನೊರೊನ್ಹ 14ಕ್ಕೆ4).