<p><strong>ಬೆಳಗಾವಿ:</strong> ಶಿವಕುಮಾರ್ ಬಿ.ಯು. ಶತಕ (111; 145ಎ, 15ಬೌಂ) ಮತ್ತು ಎನ್. ಜಯೇಶ್ ಅರ್ಧಶತಕದ (ಔಟಾಗದೇ 57; 122ಎ, 5ಬೌಂ) ಬಲದಿಂದ ಕರ್ನಾಟಕ ತಂಡವು 23 ವರ್ಷದೊಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಂಧ್ರ ವಿರುದ್ಧ ಗೆಲುವಿನ ‘ಕುಂದಾ’ ಸವಿಯಿತು.</p>.<p>ಇಲ್ಲಿನ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕೊನೆಯ ಹಾಗೂ 4ನೇ ದಿನದಾಟದಲ್ಲಿ ರಾಜ್ಯ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗದಲ್ಲೂ ಮಿಂಚಿತು. ಮೊದಲ ಇನಿಂಗ್ಸ್ನಲ್ಲಿ ಹಿನ್ನಡೆ ಅನುಭವಿಸಿದ್ದ ಕರ್ನಾಟಕ, ದ್ವಿತೀಯ ಇನಿಂಗ್ಸ್ನಲ್ಲಿ ಪುಟಿದೆದ್ದು 7 ವಿಕೆಟ್ಗಳಿಂದ ಜಯ ಗಳಿಸುವುದರೊಂದಿಗೆ 6 ಅಂಕಗಳನ್ನು ತನ್ನದಾಗಿಸಿಕೊಂಡಿತು. 60.5 ಓವರ್ಗಳಲ್ಲಿ 247 ರನ್ ಕಲೆ ಹಾಕಿ ಸಾಧನೆ ತೋರಿತು.</p>.<p>ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿದ್ದ ಕುಂದಾನಗರಿಯ ಪ್ರತಿಭೆ, ಉಪನಾಯಕನೂ ಆಗಿರುವ ಸುಜಯ್ ಸಾತೇರಿ 23 ಎಸೆತಗಳಲ್ಲಿ ಔಟಾಗದೇ 39 ರನ್ ಗಳಿಸಿ ಮಿಂಚಿದರು. 4 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ ತವರಿನ ಅಭಿಮಾನಿಗಳನ್ನು ರಂಜಿಸಿದರು.</p>.<p>ಮಂಗಳವಾರದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿದ್ದ ಪ್ರವಾಸಿ ತಂಡವನ್ನು ಬುಧವಾರ ವಿಜಯಕುಮಾರ್ ವೈಶಾಖ್ ಕಾಡಿದರು. ಗಿರಿನಾಥ್ ರೆಡ್ಡಿ ಹಾಗೂ ಯು. ವರ್ಮಾ ವಿಕೆಟ್ ಕೆಡವಿ ರನ್ ಗಳಿಕೆಯ ವೇಗಕ್ಕೆ ಕಡಿವಾಣ ಹಾಕಿದರು. 5 ವಿಕೆಟ್ ಪಡೆದಿದ್ದ ಕಿಶನ್ ಎಸ್.ಬೇದರೆ ಮತ್ತೊಂದು ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ, ಆಂಧ್ರ 87.5 ಓವರ್ಗಳಲ್ಲಿ 228 ರನ್ಗಳನ್ನು ಗಳಿಸಲಷ್ಟೇ ಶಕ್ತವಾಯಿತು.</p>.<p>241 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಲುವನೀತ್ ಸಿಸೋಡಿಯಾ ನೇತೃತ್ವದ ರಾಜ್ಯ ತಂಡಕ್ಕೆ ಆರಂಭಿಕ ಬ್ಯಾಟ್ಸ್ಮನ್ಗಳಾದ ಶಿವಕುಮಾರ್ ಮತ್ತು ಅಂಕಿತ್ ಉಡುಪ ಭರವಸೆ ತುಂಬಿದರು. ಅಂಕಿತ್ ಬಳಿಕ ಶಿವಕುಮಾರ್ಗೆ ಜೊತೆಯಾದ ಜಯೇಶ್ ಜವಾಬ್ದಾರಿಯುತ ಆಟವಾಡಿದರು. ತಂಡದ ಗೆಲುವಿಗೆ ಕೊಡುಗೆ ನೀಡಿದರು.</p>.<p>ಶಿವಮೊಗ್ಗದಲ್ಲಿ ಈಚೆಗೆ ನಡೆದಿದ್ದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಇನಿಂಗ್ಸ್ ಮತ್ತು 66 ರನ್ಗಳ ಗೆಲುವು ಸಾಧಿಸಿದ್ದ ಕರ್ನಾಟಕ, ಬಳಿಕ ಗುಜರಾತ್ ಎದುರಿನ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿತ್ತು. ‘ಎ’ ಗುಂಪಿನ ಅಂಕಪಟ್ಟಿಯಲ್ಲಿ 8 ಅಂಕಗಳನ್ನು ಗಳಿಸಿತ್ತು. ಮುಂದಿನ ಪಂದ್ಯಗಳಲ್ಲಿ ಕರ್ನಾಟಕವು ಕ್ರಮವಾಗಿ ಪಂಜಾಬ್, ವಿದರ್ಭ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ತಾನ ತಂಡಗಳ ಎದುರು ಸೆಣೆಸಲಿದೆ.</p>.<p>ಈ ಬಾರಿಯ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಪರಾಭವ ಕಂಡಿರುವ ಆಂಧ್ರ, ಅಂಕಗಳ ಖಾತೆ ತೆರೆಯಲು ಸಾಧ್ಯವಾಗಿಲ್ಲ.</p>.<p><strong>ಸಂಕ್ಷಿಪ್ತ ಸ್ಕೋರು: </strong>ಆಂಧ್ರ ಮೊದಲ ಇನಿಂಗ್ಸ್ 281 ಹಾಗೂ ದ್ವಿತೀಯ ಇನಿಂಗ್ಸ್ 228 (ಗಿರಿನಾಥ್ ರೆಡ್ಡಿ 48, ಯು. ವರ್ಮಾ 30, ವೇಣು ವಿನುಕೊಂಡ ಔಟಾಗದೇ 19; ಕಿಶನ್ ಎಸ್. ಬೆದರೆ 64ಕ್ಕೆ 6, ವೈಶಾಕ್ ವಿಜಯಕುಮಾರ್ 45ಕ್ಕೆ 3, ಅಭಿಲಾಷ್ ಶೆಟ್ಟಿ 55ಕ್ಕೆ 1). ಕರ್ನಾಟಕ ಮೊದಲ ಇನಿಂಗ್ಸ್ 268 ಹಾಗೂ ದ್ವಿತೀಯ ಇನಿಂಗ್ಸ್ 3 ವಿಕೆಟ್ ನಷ್ಟಕ್ಕೆ 60.5 ಓವರ್ಗಳಲ್ಲಿ 247 (ಶಿವಕುಮಾರ್ ಬಿ.ಯು. 111, ಅಂಕಿತ್ ಉಡುಪ 24, ಎನ್. ಜಯೇಶ್ ಔಟಾಗದೆ 57, ಸುಜಯ್ ಸಾತೇರಿ ಔಟಾಗದೆ 39; ಎ. ಪ್ರಣಯ್ಕುಮಾರ್ 30ಕ್ಕೆ 2, ಕೆ. ಮಹೀಪ್ಕುಮಾರ್ 16ಕ್ಕ 1).</p>.<p><strong>ಫಲಿತಾಂಶ: ಕರ್ನಾಟಕಕ್ಕೆ 7 ವಿಕೆಟ್ಗಳಿಂದ ಜಯ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಶಿವಕುಮಾರ್ ಬಿ.ಯು. ಶತಕ (111; 145ಎ, 15ಬೌಂ) ಮತ್ತು ಎನ್. ಜಯೇಶ್ ಅರ್ಧಶತಕದ (ಔಟಾಗದೇ 57; 122ಎ, 5ಬೌಂ) ಬಲದಿಂದ ಕರ್ನಾಟಕ ತಂಡವು 23 ವರ್ಷದೊಳಗಿನವರ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಂಧ್ರ ವಿರುದ್ಧ ಗೆಲುವಿನ ‘ಕುಂದಾ’ ಸವಿಯಿತು.</p>.<p>ಇಲ್ಲಿನ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕೊನೆಯ ಹಾಗೂ 4ನೇ ದಿನದಾಟದಲ್ಲಿ ರಾಜ್ಯ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗದಲ್ಲೂ ಮಿಂಚಿತು. ಮೊದಲ ಇನಿಂಗ್ಸ್ನಲ್ಲಿ ಹಿನ್ನಡೆ ಅನುಭವಿಸಿದ್ದ ಕರ್ನಾಟಕ, ದ್ವಿತೀಯ ಇನಿಂಗ್ಸ್ನಲ್ಲಿ ಪುಟಿದೆದ್ದು 7 ವಿಕೆಟ್ಗಳಿಂದ ಜಯ ಗಳಿಸುವುದರೊಂದಿಗೆ 6 ಅಂಕಗಳನ್ನು ತನ್ನದಾಗಿಸಿಕೊಂಡಿತು. 60.5 ಓವರ್ಗಳಲ್ಲಿ 247 ರನ್ ಕಲೆ ಹಾಕಿ ಸಾಧನೆ ತೋರಿತು.</p>.<p>ಮೊದಲ ಇನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿದ್ದ ಕುಂದಾನಗರಿಯ ಪ್ರತಿಭೆ, ಉಪನಾಯಕನೂ ಆಗಿರುವ ಸುಜಯ್ ಸಾತೇರಿ 23 ಎಸೆತಗಳಲ್ಲಿ ಔಟಾಗದೇ 39 ರನ್ ಗಳಿಸಿ ಮಿಂಚಿದರು. 4 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ ತವರಿನ ಅಭಿಮಾನಿಗಳನ್ನು ರಂಜಿಸಿದರು.</p>.<p>ಮಂಗಳವಾರದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿದ್ದ ಪ್ರವಾಸಿ ತಂಡವನ್ನು ಬುಧವಾರ ವಿಜಯಕುಮಾರ್ ವೈಶಾಖ್ ಕಾಡಿದರು. ಗಿರಿನಾಥ್ ರೆಡ್ಡಿ ಹಾಗೂ ಯು. ವರ್ಮಾ ವಿಕೆಟ್ ಕೆಡವಿ ರನ್ ಗಳಿಕೆಯ ವೇಗಕ್ಕೆ ಕಡಿವಾಣ ಹಾಕಿದರು. 5 ವಿಕೆಟ್ ಪಡೆದಿದ್ದ ಕಿಶನ್ ಎಸ್.ಬೇದರೆ ಮತ್ತೊಂದು ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ, ಆಂಧ್ರ 87.5 ಓವರ್ಗಳಲ್ಲಿ 228 ರನ್ಗಳನ್ನು ಗಳಿಸಲಷ್ಟೇ ಶಕ್ತವಾಯಿತು.</p>.<p>241 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಲುವನೀತ್ ಸಿಸೋಡಿಯಾ ನೇತೃತ್ವದ ರಾಜ್ಯ ತಂಡಕ್ಕೆ ಆರಂಭಿಕ ಬ್ಯಾಟ್ಸ್ಮನ್ಗಳಾದ ಶಿವಕುಮಾರ್ ಮತ್ತು ಅಂಕಿತ್ ಉಡುಪ ಭರವಸೆ ತುಂಬಿದರು. ಅಂಕಿತ್ ಬಳಿಕ ಶಿವಕುಮಾರ್ಗೆ ಜೊತೆಯಾದ ಜಯೇಶ್ ಜವಾಬ್ದಾರಿಯುತ ಆಟವಾಡಿದರು. ತಂಡದ ಗೆಲುವಿಗೆ ಕೊಡುಗೆ ನೀಡಿದರು.</p>.<p>ಶಿವಮೊಗ್ಗದಲ್ಲಿ ಈಚೆಗೆ ನಡೆದಿದ್ದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಇನಿಂಗ್ಸ್ ಮತ್ತು 66 ರನ್ಗಳ ಗೆಲುವು ಸಾಧಿಸಿದ್ದ ಕರ್ನಾಟಕ, ಬಳಿಕ ಗುಜರಾತ್ ಎದುರಿನ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿತ್ತು. ‘ಎ’ ಗುಂಪಿನ ಅಂಕಪಟ್ಟಿಯಲ್ಲಿ 8 ಅಂಕಗಳನ್ನು ಗಳಿಸಿತ್ತು. ಮುಂದಿನ ಪಂದ್ಯಗಳಲ್ಲಿ ಕರ್ನಾಟಕವು ಕ್ರಮವಾಗಿ ಪಂಜಾಬ್, ವಿದರ್ಭ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ತಾನ ತಂಡಗಳ ಎದುರು ಸೆಣೆಸಲಿದೆ.</p>.<p>ಈ ಬಾರಿಯ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಪರಾಭವ ಕಂಡಿರುವ ಆಂಧ್ರ, ಅಂಕಗಳ ಖಾತೆ ತೆರೆಯಲು ಸಾಧ್ಯವಾಗಿಲ್ಲ.</p>.<p><strong>ಸಂಕ್ಷಿಪ್ತ ಸ್ಕೋರು: </strong>ಆಂಧ್ರ ಮೊದಲ ಇನಿಂಗ್ಸ್ 281 ಹಾಗೂ ದ್ವಿತೀಯ ಇನಿಂಗ್ಸ್ 228 (ಗಿರಿನಾಥ್ ರೆಡ್ಡಿ 48, ಯು. ವರ್ಮಾ 30, ವೇಣು ವಿನುಕೊಂಡ ಔಟಾಗದೇ 19; ಕಿಶನ್ ಎಸ್. ಬೆದರೆ 64ಕ್ಕೆ 6, ವೈಶಾಕ್ ವಿಜಯಕುಮಾರ್ 45ಕ್ಕೆ 3, ಅಭಿಲಾಷ್ ಶೆಟ್ಟಿ 55ಕ್ಕೆ 1). ಕರ್ನಾಟಕ ಮೊದಲ ಇನಿಂಗ್ಸ್ 268 ಹಾಗೂ ದ್ವಿತೀಯ ಇನಿಂಗ್ಸ್ 3 ವಿಕೆಟ್ ನಷ್ಟಕ್ಕೆ 60.5 ಓವರ್ಗಳಲ್ಲಿ 247 (ಶಿವಕುಮಾರ್ ಬಿ.ಯು. 111, ಅಂಕಿತ್ ಉಡುಪ 24, ಎನ್. ಜಯೇಶ್ ಔಟಾಗದೆ 57, ಸುಜಯ್ ಸಾತೇರಿ ಔಟಾಗದೆ 39; ಎ. ಪ್ರಣಯ್ಕುಮಾರ್ 30ಕ್ಕೆ 2, ಕೆ. ಮಹೀಪ್ಕುಮಾರ್ 16ಕ್ಕ 1).</p>.<p><strong>ಫಲಿತಾಂಶ: ಕರ್ನಾಟಕಕ್ಕೆ 7 ವಿಕೆಟ್ಗಳಿಂದ ಜಯ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>