ಅಪ್ಪನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿರಾಜ್, 'ತಂದೆಯ ನಿಧನ ವಾರ್ತೆಯು ನನಗೆ ಮಾನಸಿಕವಾಗಿ ಖಿನ್ನತೆಯನ್ನುಂಟು ಮಾಡಿತ್ತು. ಆದರೆ, ನನ್ನ ತಂದೆಯ ಕನಸನ್ನು ಈಡೇರಿಸಿಕೊಂಡು ಮನೆಗೆ ಮರಳುವಂತೆ ನನ್ನ ಕುಟುಂಬ ಹೇಳಿತು. ಭಾವಿ ಪತ್ನಿಯು ನನ್ನನ್ನು ಪ್ರೇರೇಪಿಸಿದಳು ಮತ್ತು ನನ್ನ ತಂಡವು ಸಹ ಬೆಂಬಲಿಸಿತು. ನಾನು ಗಳಿಸಿದ ಎಲ್ಲಾ ವಿಕೆಟ್ಗಳನ್ನು ಅಪ್ಪನಿಗೆ ಅರ್ಪಿಸಿದೆ' ಎಂದು ಹೇಳಿದ್ದಾರೆ.