ಈ ಕುರಿತು ಮಾತನಾಡಿದ ಕಪಿಲ್, ‘ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದ ಇನ್ನಿತರ ತಂಡಗಳೂ ಪ್ರಶಸ್ತಿ ಗೆಲುವಿನ ಕನಸು ಕಂಡಿದ್ದವು. ಅವರು ಕೂಡ ಗೆಲ್ಲಲ್ಲೆಂದೇ ಇಲ್ಲಿಗೆ ಬಂದಿದ್ದರು. ಅತಿಯಾದ ನಿರೀಕ್ಷೆಗಳನ್ನಿಟ್ಟುಕೊಂಡರೆ ಸೋಲು ಎದುರುದಾಗ ಹೃದಯ ಒಡೆದು ಹೋಗುವುದು ಸಹಜ. ಆದ್ದರಿಂದ ಅತಿರಂಜಿತವಾದ ನಿರೀಕ್ಷೆಗಳು ಬೇಡ. ಸಮತೋಲನ ಇರಲಿ’ ಎಂದರು. ಅವರು ಗ್ರ್ಯಾಂಟ್ ಥೊರಂಟನ್ ಅಹ್ವಾನಿತ ಗಾಲ್ಫ್ ಟೂರ್ನಿಯ ಟೀ ಆಫ್ ಕಾರ್ಯಕ್ರಮದಲ್ಲಿ ಮಾತನಾಡಿದರು.