<p><strong>ಕೋಲ್ಕತ್ತ</strong>: ಹಾಲಿ ಚಾಂಪಿಯನ್ ಮುಂಬೈ ತಂಡ, ಶನಿವಾರ ಇಲ್ಲಿ ಆರಂಭವಾಗುವ ರಣಜಿ ಟ್ರೊಫಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸ್ಫೂರ್ತಿಯತ ಹರಿಯಾಣ ತಂಡವನ್ನು ಎದುರಿಸಲಿದ್ದು, ಫಾರ್ಮ್ ಮತ್ತು ಹಿನ್ನೆಲೆಯ ಸಾಧನೆಯ ಆಧಾರದಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. </p>.<p>ಲಾಹ್ಲಿಯ ಬನ್ಸೀಲಾಲ್ ಕ್ರೀಡಾಂಗಣದಲ್ಲಿ (ಹರಿಯಾಣದ ತವರು ತಾಣ) ನಡೆಯಬೇಕಾಗಿದ್ದ ಈ ಪಂದ್ಯವನ್ನು ಈಡನ್ ಗಾರ್ಡನ್ಗೆ ಸ್ಥಳಾಂತರಿಸಲಾಗಿದ್ದು, ಎರಡೂ ತಂಡಗಳ ಪ್ರಯಾಣ ಯೋಜನೆ ಮೇಲೆ ಪರಿಣಾಮ ಬೀರಿದೆ. ವಿಶೇಷವಾಗಿ ಹರಿಯಾಣಕ್ಕೆ ನಿರಾಸೆಯಾಗಿದ್ದು, ಬಿಸಿಸಿಐ ಈ ಸ್ಥಳಾಂತರಕ್ಕೆ ಕಾರಣವನ್ನೂ ನೀಡಿಲ್ಲ.</p>.<p>ಆದರೆ ಪಕ್ಕಾ ವೃತ್ತಿಪರ ಮುಂಬೈ ತಂಡ ದೇಶಿ ಕ್ರಿಕೆಟ್ನ ಸರ್ವೋಚ್ಚ ಟೂರ್ನಿಯಾದ ರಣಜಿ ಟ್ರೋಫಿಯಲ್ಲಿ ಅಭೂತಪೂರ್ವ 42 ಬಾರಿ ಚಾಂಪಿಯನ್ ಆಗಿ ಮೆರೆದಿದೆ.</p>.<p>ಆದರೆ ಬಲಾಢ್ಯ ಎದುರಾಳಿಯಾಗಿರುವ ಹರಿಯಾಣ ತಂಡವು ಎಂಟರ ಘಟ್ಟದ ಈ ಪಂದ್ಯ ತಟಸ್ಥ ತಾಣಕ್ಕೆ ಸ್ಥಳಾಂತರವಾಗಿರುವ ವಿಷಯಕ್ಕಿಂತ ತನ್ನ ಮುಂದಿರುವ ಸವಾಲಿನ ಬಗ್ಗೆ ಗಮನ ಕೇಂದ್ರೀಕರಿಸಿದೆ.</p>.<p>ಅಜಿಂಕ್ಯ ರಹಾನೆ ನೇತೃತ್ವದ ತಂಡದಲ್ಲಿ ತಾರಾ ವರ್ಚಸ್ಸಿನ ಆಟಗಾರರಿದ್ದಾರೆ. ಬೀಸಾಟವಾಡುವ ಸೂರ್ಯಕುಮಾರ್ ಯಾದವ್, ಆಲ್ರೌಂಡರ್ ಶಿವಂ ದುಬೆ ಅವರು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ನಂತರ ತಂಡಕ್ಕೆ ಮರಳಿದ್ದಾರೆ. ಈ ಋತುವಿನಲ್ಲಿ ಇವರು ಮುಂಬೈ ಪರ ಒಂದೊಂದು ಪಂದ್ಯ ಆಡಿದ್ದಾರೆ. ಆದರೆ ಮುಂಬೈ ತಂಡದ ಪ್ರಮುಖ ಬ್ಯಾಟರ್ಗಳು ಕೈಕೊಟ್ಟಿದ್ದೇ ಹೆಚ್ಚು.</p>.<p>ಅಂಕಿತ್ ಕುಮಾರ್ ನೇತೃತ್ವದ ಹರಿಯಾಣ ತಂಡವು ನಿಶಾಂತ್ ಸಿಂಧು, ಹಿಮಾಂಶು ರಾಣಾ, ಯುವರಾಜ್ ಸಿಂಗ್ ಅವರನ್ನು ಬ್ಯಾಟಿಂಗ್ನಲ್ಲಿ ನೆಚ್ಚಿಕೊಂಡಿದೆ. ಬೌಲಿಂಗ್ನಲ್ಲಿ ಅನ್ಶುಲ್ ಕಾಂಬೋಜ್, ಅನುಜ್ ಟಕ್ರಾಲ್ ಮತ್ತು ಜಯಂತ್ ಯಾದವ್ ಈ ಋತುವಿನಲ್ಲಿ ಯಶಸ್ಸು ಕಂಡಿದ್ದಾರೆ.</p>.<p><strong>ವಿಶ್ವಾಸದಲ್ಲಿ ವಿದರ್ಭ:</strong></p>.<p>ಏಳು ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ ಲೀಗ್ನಲ್ಲಿ 40 ಪಾಯಿಂಟ್ಸ್ ಗಳಿಸಿ ಎಂಟರ ಘಟ್ಟ ತಲುಪಿರುವ ವಿದರ್ಭ ಈ ಬಾರಿ ಅತಿ ಹೆಚ್ಚು ಪಾಯಿಂಟ್ಸ್ ಕಲೆಹಾಕಿದ ತಂಡವೆನಿಸಿದೆ. ಹೀಗಾಗಿ ತವರು ನಾಗ್ಪುರದಲ್ಲಿ ತಮಿಳುನಾಡು ತಂಡದ ವಿರುದ್ಧ ಶನಿವಾರ ಆರಂಭವಾಗುವ ಇನ್ನೊಂದು ಕ್ವಾರ್ಟರ್ಫೈನಲ್ನಲ್ಲಿ ಅದು ಗೆಲ್ಲುವ ನೆಚ್ಚಿನ ತಂಡವೆನಿಸಿದೆ.</p>.<p>ತಮಿಳುನಾಡು ಡಿ ಗುಂಪಿನಲ್ಲಿ ಮೂರು ಗೆಲುವು, ಮೂರು ಡ್ರಾಗಳೊಡನೆ ಅಗ್ರಸ್ಥಾನ ಪಡೆದಿತ್ತು.</p>.<p>ಕೇರಳಕ್ಕೆ ಸವಾಲು: ಜಮ್ಮು ಮತ್ತು ಕಾಶ್ಮೀರ ತಂಡ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯುವ ಇನ್ನೊಂದು ಪಂದ್ಯದಲ್ಲಿ ಕೇರಳ ತಂಡವನ್ನು ಎದುರಿಸಲಿದೆ.</p>.<p><strong>ಹೆಚ್ಚಿದ ಸೌರಾಷ್ಟ್ರ ಮನೋಬಲ</strong></p>.<p>ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳ ನಂತರ ಕೊನೆಯ ಸ್ಥಾನದಲ್ಲಿದ್ದ ಸೌರಾಷ್ಟ್ರ ನಂತರ ಸತತ ಮೂರು ಗೆಲುವು ಕಂಡು ಕ್ವಾರ್ಟರ್ಫೈನಲ್ಗೆ ಅರ್ಹತೆ ಪಡೆದಿತ್ತು. ಜಯದೇವ ಉನದ್ಕತ್ ನೇತೃತ್ವದ ಈ ತಂಡ ತವರು ರಾಜಕೋಟ್ನಲ್ಲಿ ನಡೆಯುವ ಪಂದ್ಯದಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ.</p>.<p>ಐದು ವರ್ಷಗಳಲ್ಲಿ ಮೂರನೇ ಬಾರಿ ರಣಜಿ ಟ್ರೋಫಿ ಗೆಲ್ಲಲು ಸೌರಾಷ್ಟ್ರ ಅಭಿಯಾನ ನಡೆಸಿದೆ. ಆದರೆ ಈ ತಂಡವು ಲೀಗ್ನಲ್ಲಿ 32 ಪಾಯಿಂಟ್ಸ್ ಕಲೆಹಾಕಿದ್ದ ಗುಜರಾತ್ ತಂಡವನ್ನು ನಿರ್ಲಕ್ಷಿಸುವಂತಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಹಾಲಿ ಚಾಂಪಿಯನ್ ಮುಂಬೈ ತಂಡ, ಶನಿವಾರ ಇಲ್ಲಿ ಆರಂಭವಾಗುವ ರಣಜಿ ಟ್ರೊಫಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸ್ಫೂರ್ತಿಯತ ಹರಿಯಾಣ ತಂಡವನ್ನು ಎದುರಿಸಲಿದ್ದು, ಫಾರ್ಮ್ ಮತ್ತು ಹಿನ್ನೆಲೆಯ ಸಾಧನೆಯ ಆಧಾರದಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. </p>.<p>ಲಾಹ್ಲಿಯ ಬನ್ಸೀಲಾಲ್ ಕ್ರೀಡಾಂಗಣದಲ್ಲಿ (ಹರಿಯಾಣದ ತವರು ತಾಣ) ನಡೆಯಬೇಕಾಗಿದ್ದ ಈ ಪಂದ್ಯವನ್ನು ಈಡನ್ ಗಾರ್ಡನ್ಗೆ ಸ್ಥಳಾಂತರಿಸಲಾಗಿದ್ದು, ಎರಡೂ ತಂಡಗಳ ಪ್ರಯಾಣ ಯೋಜನೆ ಮೇಲೆ ಪರಿಣಾಮ ಬೀರಿದೆ. ವಿಶೇಷವಾಗಿ ಹರಿಯಾಣಕ್ಕೆ ನಿರಾಸೆಯಾಗಿದ್ದು, ಬಿಸಿಸಿಐ ಈ ಸ್ಥಳಾಂತರಕ್ಕೆ ಕಾರಣವನ್ನೂ ನೀಡಿಲ್ಲ.</p>.<p>ಆದರೆ ಪಕ್ಕಾ ವೃತ್ತಿಪರ ಮುಂಬೈ ತಂಡ ದೇಶಿ ಕ್ರಿಕೆಟ್ನ ಸರ್ವೋಚ್ಚ ಟೂರ್ನಿಯಾದ ರಣಜಿ ಟ್ರೋಫಿಯಲ್ಲಿ ಅಭೂತಪೂರ್ವ 42 ಬಾರಿ ಚಾಂಪಿಯನ್ ಆಗಿ ಮೆರೆದಿದೆ.</p>.<p>ಆದರೆ ಬಲಾಢ್ಯ ಎದುರಾಳಿಯಾಗಿರುವ ಹರಿಯಾಣ ತಂಡವು ಎಂಟರ ಘಟ್ಟದ ಈ ಪಂದ್ಯ ತಟಸ್ಥ ತಾಣಕ್ಕೆ ಸ್ಥಳಾಂತರವಾಗಿರುವ ವಿಷಯಕ್ಕಿಂತ ತನ್ನ ಮುಂದಿರುವ ಸವಾಲಿನ ಬಗ್ಗೆ ಗಮನ ಕೇಂದ್ರೀಕರಿಸಿದೆ.</p>.<p>ಅಜಿಂಕ್ಯ ರಹಾನೆ ನೇತೃತ್ವದ ತಂಡದಲ್ಲಿ ತಾರಾ ವರ್ಚಸ್ಸಿನ ಆಟಗಾರರಿದ್ದಾರೆ. ಬೀಸಾಟವಾಡುವ ಸೂರ್ಯಕುಮಾರ್ ಯಾದವ್, ಆಲ್ರೌಂಡರ್ ಶಿವಂ ದುಬೆ ಅವರು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ನಂತರ ತಂಡಕ್ಕೆ ಮರಳಿದ್ದಾರೆ. ಈ ಋತುವಿನಲ್ಲಿ ಇವರು ಮುಂಬೈ ಪರ ಒಂದೊಂದು ಪಂದ್ಯ ಆಡಿದ್ದಾರೆ. ಆದರೆ ಮುಂಬೈ ತಂಡದ ಪ್ರಮುಖ ಬ್ಯಾಟರ್ಗಳು ಕೈಕೊಟ್ಟಿದ್ದೇ ಹೆಚ್ಚು.</p>.<p>ಅಂಕಿತ್ ಕುಮಾರ್ ನೇತೃತ್ವದ ಹರಿಯಾಣ ತಂಡವು ನಿಶಾಂತ್ ಸಿಂಧು, ಹಿಮಾಂಶು ರಾಣಾ, ಯುವರಾಜ್ ಸಿಂಗ್ ಅವರನ್ನು ಬ್ಯಾಟಿಂಗ್ನಲ್ಲಿ ನೆಚ್ಚಿಕೊಂಡಿದೆ. ಬೌಲಿಂಗ್ನಲ್ಲಿ ಅನ್ಶುಲ್ ಕಾಂಬೋಜ್, ಅನುಜ್ ಟಕ್ರಾಲ್ ಮತ್ತು ಜಯಂತ್ ಯಾದವ್ ಈ ಋತುವಿನಲ್ಲಿ ಯಶಸ್ಸು ಕಂಡಿದ್ದಾರೆ.</p>.<p><strong>ವಿಶ್ವಾಸದಲ್ಲಿ ವಿದರ್ಭ:</strong></p>.<p>ಏಳು ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ ಲೀಗ್ನಲ್ಲಿ 40 ಪಾಯಿಂಟ್ಸ್ ಗಳಿಸಿ ಎಂಟರ ಘಟ್ಟ ತಲುಪಿರುವ ವಿದರ್ಭ ಈ ಬಾರಿ ಅತಿ ಹೆಚ್ಚು ಪಾಯಿಂಟ್ಸ್ ಕಲೆಹಾಕಿದ ತಂಡವೆನಿಸಿದೆ. ಹೀಗಾಗಿ ತವರು ನಾಗ್ಪುರದಲ್ಲಿ ತಮಿಳುನಾಡು ತಂಡದ ವಿರುದ್ಧ ಶನಿವಾರ ಆರಂಭವಾಗುವ ಇನ್ನೊಂದು ಕ್ವಾರ್ಟರ್ಫೈನಲ್ನಲ್ಲಿ ಅದು ಗೆಲ್ಲುವ ನೆಚ್ಚಿನ ತಂಡವೆನಿಸಿದೆ.</p>.<p>ತಮಿಳುನಾಡು ಡಿ ಗುಂಪಿನಲ್ಲಿ ಮೂರು ಗೆಲುವು, ಮೂರು ಡ್ರಾಗಳೊಡನೆ ಅಗ್ರಸ್ಥಾನ ಪಡೆದಿತ್ತು.</p>.<p>ಕೇರಳಕ್ಕೆ ಸವಾಲು: ಜಮ್ಮು ಮತ್ತು ಕಾಶ್ಮೀರ ತಂಡ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯುವ ಇನ್ನೊಂದು ಪಂದ್ಯದಲ್ಲಿ ಕೇರಳ ತಂಡವನ್ನು ಎದುರಿಸಲಿದೆ.</p>.<p><strong>ಹೆಚ್ಚಿದ ಸೌರಾಷ್ಟ್ರ ಮನೋಬಲ</strong></p>.<p>ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳ ನಂತರ ಕೊನೆಯ ಸ್ಥಾನದಲ್ಲಿದ್ದ ಸೌರಾಷ್ಟ್ರ ನಂತರ ಸತತ ಮೂರು ಗೆಲುವು ಕಂಡು ಕ್ವಾರ್ಟರ್ಫೈನಲ್ಗೆ ಅರ್ಹತೆ ಪಡೆದಿತ್ತು. ಜಯದೇವ ಉನದ್ಕತ್ ನೇತೃತ್ವದ ಈ ತಂಡ ತವರು ರಾಜಕೋಟ್ನಲ್ಲಿ ನಡೆಯುವ ಪಂದ್ಯದಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ.</p>.<p>ಐದು ವರ್ಷಗಳಲ್ಲಿ ಮೂರನೇ ಬಾರಿ ರಣಜಿ ಟ್ರೋಫಿ ಗೆಲ್ಲಲು ಸೌರಾಷ್ಟ್ರ ಅಭಿಯಾನ ನಡೆಸಿದೆ. ಆದರೆ ಈ ತಂಡವು ಲೀಗ್ನಲ್ಲಿ 32 ಪಾಯಿಂಟ್ಸ್ ಕಲೆಹಾಕಿದ್ದ ಗುಜರಾತ್ ತಂಡವನ್ನು ನಿರ್ಲಕ್ಷಿಸುವಂತಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>