<p><strong>ಕಾನ್ಪುರ:</strong> ಭಾನುವಾರ ಇಲ್ಲಿ ಒಂದು ಹನಿ ಮಳೆ ಕೂಡ ಬರಲಿಲ್ಲ. ಆದರೂ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಣ ಟೆಸ್ಟ್ ಪಂದ್ಯದ ಮೂರನೇ ದಿನದಾಟ ನಡೆಯಲಿಲ್ಲ. ಇದು ಕ್ರೀಡಾಂಗಣದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ.</p>.<p>ಪಂದ್ಯದ ಮೊದಲ ದಿನದಂದು 35 ಓವರ್ಗಳ ಆಟ ಮಾತ್ರ ನಡೆದಿತ್ತು. ಶನಿವಾರವೂ ಒಂದೂ ಎಸೆತ ಕಾಣದೇ ದಿನದಾಟ ರದ್ದಾಗಿತ್ತು. </p>.<p>ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆ ನಿರ್ದೇಶಕ ಸಂಜಯ್ ಕಪೂರ್, ‘ಆ ದೇವರು ನಮಗೆ ಟೆಸ್ಟ್ ಪಂದ್ಯ ಮಂಜೂರು ಮಾಡಿದ್ದಾನೆ. ಅವನೇ ಉಳಿದದ್ದನ್ನು ನೋಡಿಕೊಳ್ಳುತ್ತಾನೆ’ ಎಂದರು. ಆದರೆ ಇಲ್ಲಿ ಮಾನವಕೃತ ಲೋಪಗಳನ್ನು ಸರಿಪಡಿಸಬೇಕೆಂದರೆ ಪವಾಡವೇ ನಡೆಯಬೇಕೇನೊ? </p>.<p>ಭಾನುವಾರ ಬೆಳಿಗ್ಗೆ 6ರಿಂದ ಒಂದೂ ಹನಿ ಮಳೆ ಬರಲಿಲ್ಲ. ಆದರೆ ಪಿಚ್ಗಳು ತೇವವಾಗಿದ್ದವು. ಮೈದಾನದ ಕೆಲವು ಸ್ಥಳಗಳಲ್ಲಿ ನೀರು ನಿಂತಿತ್ತು. ಬೌಂಡರಿ ಲೈನ್ ಮತ್ತು ಬೌಲರ್ಗಳ ರನ್ ಅಪ್ ಕೂಡ ತೇವಗೊಂಡಿದ್ದವು. ಬೆಳಿಗ್ಗೆ 10, ಮಧ್ಯಾಹ್ನ 12 ಮತ್ತು 2 ಗಂಟೆಗೆ ಅಂಪೈರ್ಗಳು ಪಿಚ್ ಮತ್ತು ಹೊರಾಂಗಣ ಮೈದಾನ ಪರಿಶೀಲಿಸಿದರು. ಹೊರಾಂಗಣದಲ್ಲಿ ತೇವ ಹೆಚ್ಚಿರುವುದರಿಂದ ದಿನದಾಟ ರದ್ದು ಮಾಡಲಾಯಿತು. ಕ್ರೀಡಾಂಗಣ ಸಿಬ್ಬಂದಿಯ ಕಾರ್ಯವೈಖರಿಯೂ ಚುರುಕಾಗಿರಲಿಲ್ಲ. ಇದರಿಂದಾಗಿ ರಜೆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ನಿರಾಶೆಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾನ್ಪುರ:</strong> ಭಾನುವಾರ ಇಲ್ಲಿ ಒಂದು ಹನಿ ಮಳೆ ಕೂಡ ಬರಲಿಲ್ಲ. ಆದರೂ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಣ ಟೆಸ್ಟ್ ಪಂದ್ಯದ ಮೂರನೇ ದಿನದಾಟ ನಡೆಯಲಿಲ್ಲ. ಇದು ಕ್ರೀಡಾಂಗಣದ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ.</p>.<p>ಪಂದ್ಯದ ಮೊದಲ ದಿನದಂದು 35 ಓವರ್ಗಳ ಆಟ ಮಾತ್ರ ನಡೆದಿತ್ತು. ಶನಿವಾರವೂ ಒಂದೂ ಎಸೆತ ಕಾಣದೇ ದಿನದಾಟ ರದ್ದಾಗಿತ್ತು. </p>.<p>ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಉತ್ತರಪ್ರದೇಶ ಕ್ರಿಕೆಟ್ ಸಂಸ್ಥೆ ನಿರ್ದೇಶಕ ಸಂಜಯ್ ಕಪೂರ್, ‘ಆ ದೇವರು ನಮಗೆ ಟೆಸ್ಟ್ ಪಂದ್ಯ ಮಂಜೂರು ಮಾಡಿದ್ದಾನೆ. ಅವನೇ ಉಳಿದದ್ದನ್ನು ನೋಡಿಕೊಳ್ಳುತ್ತಾನೆ’ ಎಂದರು. ಆದರೆ ಇಲ್ಲಿ ಮಾನವಕೃತ ಲೋಪಗಳನ್ನು ಸರಿಪಡಿಸಬೇಕೆಂದರೆ ಪವಾಡವೇ ನಡೆಯಬೇಕೇನೊ? </p>.<p>ಭಾನುವಾರ ಬೆಳಿಗ್ಗೆ 6ರಿಂದ ಒಂದೂ ಹನಿ ಮಳೆ ಬರಲಿಲ್ಲ. ಆದರೆ ಪಿಚ್ಗಳು ತೇವವಾಗಿದ್ದವು. ಮೈದಾನದ ಕೆಲವು ಸ್ಥಳಗಳಲ್ಲಿ ನೀರು ನಿಂತಿತ್ತು. ಬೌಂಡರಿ ಲೈನ್ ಮತ್ತು ಬೌಲರ್ಗಳ ರನ್ ಅಪ್ ಕೂಡ ತೇವಗೊಂಡಿದ್ದವು. ಬೆಳಿಗ್ಗೆ 10, ಮಧ್ಯಾಹ್ನ 12 ಮತ್ತು 2 ಗಂಟೆಗೆ ಅಂಪೈರ್ಗಳು ಪಿಚ್ ಮತ್ತು ಹೊರಾಂಗಣ ಮೈದಾನ ಪರಿಶೀಲಿಸಿದರು. ಹೊರಾಂಗಣದಲ್ಲಿ ತೇವ ಹೆಚ್ಚಿರುವುದರಿಂದ ದಿನದಾಟ ರದ್ದು ಮಾಡಲಾಯಿತು. ಕ್ರೀಡಾಂಗಣ ಸಿಬ್ಬಂದಿಯ ಕಾರ್ಯವೈಖರಿಯೂ ಚುರುಕಾಗಿರಲಿಲ್ಲ. ಇದರಿಂದಾಗಿ ರಜೆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ನಿರಾಶೆಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>