ಬಳಿಕ ಮಾತನಾಡಿದ ಮೈಕೆಲ್ ಕ್ಲಿಂಗರ್, ‘ದೇಸಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ತಂಡದಲ್ಲಿದ್ದಾರೆ. ನಿತ್ಯ ಅಭ್ಯಾಸದಲ್ಲಿ ತೊಡಗಿದ್ದು, ಈ ಬಾರಿ ಲೀಗ್ನಲ್ಲಿ ಉತ್ತಮವಾಗಿ ಆಡುತ್ತಾರೆಂಬ ವಿಶ್ವಾಸ ಇದೆ. ಪ್ರತಿ ಆವೃತ್ತಿಯಲ್ಲೂ ತಂಡದ ಗೆಲುವಿನ ಕುರಿತು ಕಾರ್ಯತಂತ್ರ ರೂಪಿಸಲಾಗುವುದು. ಆಟಗಾರರ ಜತೆ ಚರ್ಚಿಸಿ ಅದನ್ನು ಕಾರ್ಯರೂಪಕ್ಕೆ ತರಲಾಗುವುದು’ ಎಂದು ಹೇಳಿದರು.