‘ಜಲಂಧರ್ ನನ್ನ ತವರೂರು. ನಾನು ಮೊದಲು ದೌಲತಾಪುರಿಯಲ್ಲಿ ಇದದೆ. ಅಲ್ಲಿ ನನ್ನ ಬಹಳಷ್ಟು ಆಪ್ತಮಿತ್ರರು ಇದ್ದಾರೆ. ಅವರ ಮೂಲಕ ಇವತ್ತು 500 ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಿಸಲಾಗಿದೆ. ಜಲಂಧರ್ ಪೊಲೀಸ್ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ. ಅವರೂ ನಮ್ಮ ಕಾರ್ಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ’ ಎಂದು ಮುಂಬೈನಲ್ಲಿರುವ ಹರಭಜನ್ ತಿಳಿಸಿದ್ದಾರೆ.