ಅಮೃತಸರ: ಖಲಿಸ್ತಾನ ಉಗ್ರರನ್ನು ಹುತ್ಮಾತರೆಂದು ಬಿಂಬಿಸಿ ಸ್ಮರಿಸಿ ಮಾಡಲಾಗಿದ್ದ ಪೋಸ್ಟ್ಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟಿಗ, ಆಫ್ ಸ್ಪಿನ್ನರ್ ಹರಭಜನ್ ಸಿಂಗ್, ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ಜನರಿಗೆ ನನ್ನ ಅಂತರಾಳದಿಂದ ಕ್ಷಮೆಯಾಚನೆ ಮಾಡುತ್ತೇನೆ ಎಂದು ಬರೆದಿದ್ದಾರೆ.