ಎದುರಾಳಿ ಹುಬ್ಬಳ್ಳಿ ಕೋಲ್ಟ್ಸ್ ತಂಡ 22.5 ಓವರ್ಗಳಲ್ಲಿ 125 ರನ್ ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು. ಈ ತಂಡದ ಆದರ್ಶ ಸುರೇಬಾನ್ (40) ಮತ್ತು ಮಾಧವ ಡಿ. (33) ಉತ್ತಮ ಹೋರಾಟ ತೋರಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಎಚ್ಸಿಎ ತಂಡದ ಆದಿತ್ಯ ಯ. ಹಾಗೂ ಮಣಿಕಂಠ ತಲಾ ಮೂರು ವಿಕೆಟ್ಗಳನ್ನು ಕಬಳಿಸಿ ಜಯ ತಂದುಕೊಡುವಲ್ಲಿ ಪ್ರಮುಖ ಕಾರಣರಾದರು. ಅತಿಥಿಯಾಗಿ ಬಂದಿದ್ದ ಅರ್ಜುನ ಪಾಟೀಲ ಅವರು ಮಣಿಕಂಠಗೆ ಪಂದ್ಯ ಶ್ರೇಷ್ಠ ಗೌರವ ನೀಡಿದರು.