ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರಕರ್ ಅವರು ಏನೇ ನಿರ್ಧಾರ ಕೈಗೊಂಡರೂ ನಾನು ಗೌರವಿಸುತ್ತೇನೆ. ಆದರೆ ಭಾರತ ತಂಡದಲ್ಲಿ (ಟಿ20 ವಿಶ್ವಕಪ್ ಟೂರ್ನಿ) ಆಡಲು ಸಂಪೂರ್ಣ ಸಿದ್ಧವಾಗಿರುವೆ. ವಿಶ್ವಕಪ್ ಆಡಲು ವಿಮಾನವೇರುವ ಆಸೆಯಂತೂ ಇದೆ’ ಎಂದರು.