ಸರಣಿಯಲ್ಲಿ 0–1 ಅಂತರದಿಂದ ಹಿನ್ನಡೆಯಲ್ಲಿರುವ ಭಾರತಕ್ಕೆ, ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ಮೇಲೆ ಒತ್ತಡ ಹೇರಬೇಕಾದರೆ 500ಕ್ಕೂ ಅಧಿಕ ರನ್ ಪೇರಿಸಬೇಕು. ಮೂರನೇ ದಿನದಿಂದ ಬೌನ್ಸ್ ಹೆಚ್ಚಾಗುವುದರಿಂದ ಹೆಚ್ಚಿನ ರನ್ ಕಲೆ ಹಾಕುವುದು ಅವಶ್ಯಕ.
ಇತರೆ ಬ್ಯಾಟರ್ಗಳ ವೈಫಲ್ಯ
ಜೈಸ್ವಾಲ್ ಹೊರತುಪಡಿಸಿ ಇತರ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ನಾಯಕ ರೋಹಿತ್ ಶರ್ಮಾ ಆಟ 14 ರನ್ಗೆ ಅಂತ್ಯವಾದರೆ, ಶುಭಮನ್ ಗಿಲ್ 34ರನ್ ಗಳಿಸುವಷ್ಟರಲ್ಲಿ ಸುಸ್ತಾದರು. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ (27), ರಜತ್ ಪಾಟೀದಾರ್ (32), ಅಕ್ಷರ್ ಪಟೇಲ್ (27) ಹಾಗೂ ಶ್ರೀಕರ್ ಭರತ್ (17) ಅವರಿಂದಲೂ ಉತ್ತಮ ಪ್ರದರ್ಶನ ಬರಲಿಲ್ಲ.