<p><strong>ಹೈದರಾಬಾದ್:</strong> ಭಾರತ ಕ್ರಿಕೆಟ್ ತಂಡವು ವೇಗಿ ಜಸ್ಪ್ರೀತ್ ಬೂಮ್ರಾ ಅವರ ಮೇಲೆ ವಿಪರೀತ ಅವಲಂಬಿತವಾಗಿದೆ. ಮುಂಬರುವ ಎಜ್ಬಾಸ್ಟನ್ ಟೆಸ್ಟ್ನಲ್ಲಿ ತಂಡವು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸಬೇಕು ಎಂದು ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಲೀಡ್ಸ್ನಲ್ಲಿ ಹೋದವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಭಾರತ ತಂಡವು 5 ವಿಕೆಟ್ಗಳಿಂದ ಸೋತಿತ್ತು. ಆ ಪಂದ್ಯದಲ್ಲಿ ಭಾರತ ತಂಡವು ವಿಕೆಟ್ ಗಳಿಕೆ ಮತ್ತು ರನ್ ನಿಯಂತ್ರಣಕ್ಕೆ ಬೂಮ್ರಾ ಅವರ ಮೇಲೆ ಅವಲಂಬಿತವಾಗಿದ್ದು ಎದ್ದು ಕಂಡಿತ್ತು.</p>.<p>ಈ ಕುರಿತು ಪಿಟಿಐ ವಿಡಿಯೊಸ್ ನಲ್ಲಿ ಮಾತನಾಡಿರುವ ಅವರು, ‘ಬೂಮ್ರಾ ಅವರ ಮೇಲೆ ಅತಿಯಾದ ಅವಲಂಬನೆ ಸಲ್ಲದು. ಅನುಭವಿ ಬೌಲರ್ಗಳ ಅಗತ್ಯ ತಂಡಕ್ಕಿದೆ. ಆದ್ದರಿಂದ ಕುಲದೀಪ್ ಯಾದವ್ ಅವರನ್ನು ಆಡಿಸುವುದು ಸೂಕ್ತ. ಅದರಿಂದ ತಂಡದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು’ ಎಂದರು. </p>.<p>‘ಬ್ಯಾಟರ್ಗಳ ಕುಸಿತವೂ ಮೊದಲ ಪಂದ್ಯದ ಸೋಲಿಗೆ ಒಂದು ಕಾರಣ. ಆದ್ದರಿಂದ ಸೂಕ್ತ ಆಟಗಾರರನ್ನು ಆಯ್ಕೆ ಮಾಡುವುದು ಮುಖ್ಯ. ಬೌಲಿಂಗ್ ವಿಭಾಗವು ಕರಾರುವಾಕ್ ಆಗಿರಬೇಕು’ ಎಂದು 62 ವರ್ಷದ ಅಜರುದ್ದೀನ್ ಹೇಳಿದರು. </p>.<p>‘ಶುಭಮನ್ ಗಿಲ್ ಅವರು ನಾಯಕರಾಗಿ ಆಡಿದ ಮೊದಲ ಪಂದ್ಯ ಇದು. ಅವರ ನಾಯಕತ್ವದ ಕುರಿತು ಈಗಲೇ ಮಾತನಾಡುವುದು ಸಲ್ಲದು. ಅವರಿಗೆ ಇನ್ನೂ ಅವಕಾಶಗಳನ್ನು ನೀಡಬೇಕು. ಬಹಳಷ್ಟು ಸಮಯ ಮತ್ತು ಬೆಂಬಲ ಕೊಡಬೇಕು. ಸುಮ್ಮನೇ ದೂರುವುದು ಅಥವಾ ಟೀಕಿಸುವುದನ್ನು ಮಾಡಬಾರದು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಭಾರತ ಕ್ರಿಕೆಟ್ ತಂಡವು ವೇಗಿ ಜಸ್ಪ್ರೀತ್ ಬೂಮ್ರಾ ಅವರ ಮೇಲೆ ವಿಪರೀತ ಅವಲಂಬಿತವಾಗಿದೆ. ಮುಂಬರುವ ಎಜ್ಬಾಸ್ಟನ್ ಟೆಸ್ಟ್ನಲ್ಲಿ ತಂಡವು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸಬೇಕು ಎಂದು ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಲೀಡ್ಸ್ನಲ್ಲಿ ಹೋದವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಭಾರತ ತಂಡವು 5 ವಿಕೆಟ್ಗಳಿಂದ ಸೋತಿತ್ತು. ಆ ಪಂದ್ಯದಲ್ಲಿ ಭಾರತ ತಂಡವು ವಿಕೆಟ್ ಗಳಿಕೆ ಮತ್ತು ರನ್ ನಿಯಂತ್ರಣಕ್ಕೆ ಬೂಮ್ರಾ ಅವರ ಮೇಲೆ ಅವಲಂಬಿತವಾಗಿದ್ದು ಎದ್ದು ಕಂಡಿತ್ತು.</p>.<p>ಈ ಕುರಿತು ಪಿಟಿಐ ವಿಡಿಯೊಸ್ ನಲ್ಲಿ ಮಾತನಾಡಿರುವ ಅವರು, ‘ಬೂಮ್ರಾ ಅವರ ಮೇಲೆ ಅತಿಯಾದ ಅವಲಂಬನೆ ಸಲ್ಲದು. ಅನುಭವಿ ಬೌಲರ್ಗಳ ಅಗತ್ಯ ತಂಡಕ್ಕಿದೆ. ಆದ್ದರಿಂದ ಕುಲದೀಪ್ ಯಾದವ್ ಅವರನ್ನು ಆಡಿಸುವುದು ಸೂಕ್ತ. ಅದರಿಂದ ತಂಡದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು’ ಎಂದರು. </p>.<p>‘ಬ್ಯಾಟರ್ಗಳ ಕುಸಿತವೂ ಮೊದಲ ಪಂದ್ಯದ ಸೋಲಿಗೆ ಒಂದು ಕಾರಣ. ಆದ್ದರಿಂದ ಸೂಕ್ತ ಆಟಗಾರರನ್ನು ಆಯ್ಕೆ ಮಾಡುವುದು ಮುಖ್ಯ. ಬೌಲಿಂಗ್ ವಿಭಾಗವು ಕರಾರುವಾಕ್ ಆಗಿರಬೇಕು’ ಎಂದು 62 ವರ್ಷದ ಅಜರುದ್ದೀನ್ ಹೇಳಿದರು. </p>.<p>‘ಶುಭಮನ್ ಗಿಲ್ ಅವರು ನಾಯಕರಾಗಿ ಆಡಿದ ಮೊದಲ ಪಂದ್ಯ ಇದು. ಅವರ ನಾಯಕತ್ವದ ಕುರಿತು ಈಗಲೇ ಮಾತನಾಡುವುದು ಸಲ್ಲದು. ಅವರಿಗೆ ಇನ್ನೂ ಅವಕಾಶಗಳನ್ನು ನೀಡಬೇಕು. ಬಹಳಷ್ಟು ಸಮಯ ಮತ್ತು ಬೆಂಬಲ ಕೊಡಬೇಕು. ಸುಮ್ಮನೇ ದೂರುವುದು ಅಥವಾ ಟೀಕಿಸುವುದನ್ನು ಮಾಡಬಾರದು’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>