<p><strong>ಕೋಲ್ಕತ್ತ:</strong> ದಕ್ಷಿಣ ಆಫ್ರಿಕಾ ತಂಡವು 15 ವರ್ಷಗಳಿಂದ ಭಾರತದಲ್ಲಿ ಟೆಸ್ಟ್ ಪಂದ್ಯ ಗೆದ್ದಿಲ್ಲ. ಆದರೆ ಮುಂಬರುವ ಸರಣಿಯಲ್ಲಿ ಅದನ್ನು ಕೊನೆಗೊಳಿಸುವ ಹಸಿವು ಮತ್ತು ಬಯಕೆ ಇದೆ ಎಂದು ಸ್ಪಿನ್ನರ್ ಕೇಶವ್ ಮಹಾರಾಜ್ ಹೇಳಿದ್ದಾರೆ.</p><p>ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ನವೆಂಬರ್ 14 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಗಳು ಕ್ರಮವಾಗಿ ಕೊಲ್ಕತ್ತ ಹಾಗೂ ಗುವಾಹಟಿಯಲ್ಲಿ ನಡೆಯಲಿವೆ. </p><p>ಭಾರತದಲ್ಲಿ ಸರಣಿ ಗೆಲ್ಲಲು ದಕ್ಷಿಣ ಆಫ್ರಿಕಾ ತಂಡಕ್ಕಿರುವ ಸವಾಲುಗಳನ್ನು ಕೇಶವ್ ಮಹರಾಜ್ ಒಪ್ಪಿಕೊಂಡಿದ್ದಾರೆ. ‘ಭಾರತ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸಬೇಕೆಂಬುದು ನಮ್ಮ ನಿಜವಾದ ಹಸಿವು ಮತ್ತು ಬಯಕೆಯಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೈಕಲ್ನಲ್ಲಿ ಇದು ಅತ್ಯಂತ ಕಠಿಣ ಪ್ರವಾಸಗಳಲ್ಲಿ ಒಂದಾಗಲಿದೆ’ ಎಂದಿದ್ದಾರೆ.</p><p>‘ಇದು ನಮ್ಮ ಅತೀ ದೊಡ್ಡ ಪರೀಕ್ಷೆಗಳಲ್ಲಿ ಒಂದಾಗಿದೆ ಎಂದು ನಾವು ಭಾವಿಸುತ್ತೇನೆ. ನಮ್ಮ ತಂಡ ಡಬ್ಲೂಟಿಸಿ ಸೈಕಲ್ನಲ್ಲಿ ಎಷ್ಟರ ಮಟ್ಟಿಗೆ ಸಿದ್ಧತೆ ಮಾಡಿಕೊಂಡಿದೆ ಎಂಬುದನ್ನು ತಿಳಿದುಕೊಳ್ಳಲು ಭಾರತ ಪ್ರವಾಸ ಉತ್ತಮ ಅವಕಾಶ ನೀಡಲಿದೆ’ ಎಂದು ತಿಳಿಸಿದ್ದಾರೆ. </p><p>‘ನಾವು ಭಾರತದ ಪಿಚ್ಗಳಲ್ಲಿ ಪಾಕಿಸ್ತಾನದಲ್ಲಿ ನೋಡಿದಷ್ಟು ಸ್ಪಿನ್ ಸ್ನೇಹಿ ಪಿಚ್ಗಳನ್ನು ನೋಡುವುದಿಲ್ಲ ಎಂದು ಭಾವಿಸುತ್ತೇನೆ. ಇಲ್ಲಿ ಬ್ಯಾಟರ್ ಹಾಗೂ ಬೌಲರ್ ಇಬ್ಬರಿಗೂ ಸಮಾನ ಅವಕಾಶ ನೀಡುತ್ತಾರೆ. ನಾವು ನಮ್ಮ ಸಾಂಪ್ರದಾಯಿಕ ಆಟಕ್ಕೆ ಮನ್ನಣೆ ನೀಡುತ್ತೇವೆ’ ಎಂದು ಕೇಶವ್ ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ದಕ್ಷಿಣ ಆಫ್ರಿಕಾ ತಂಡವು 15 ವರ್ಷಗಳಿಂದ ಭಾರತದಲ್ಲಿ ಟೆಸ್ಟ್ ಪಂದ್ಯ ಗೆದ್ದಿಲ್ಲ. ಆದರೆ ಮುಂಬರುವ ಸರಣಿಯಲ್ಲಿ ಅದನ್ನು ಕೊನೆಗೊಳಿಸುವ ಹಸಿವು ಮತ್ತು ಬಯಕೆ ಇದೆ ಎಂದು ಸ್ಪಿನ್ನರ್ ಕೇಶವ್ ಮಹಾರಾಜ್ ಹೇಳಿದ್ದಾರೆ.</p><p>ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ನವೆಂಬರ್ 14 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಗಳು ಕ್ರಮವಾಗಿ ಕೊಲ್ಕತ್ತ ಹಾಗೂ ಗುವಾಹಟಿಯಲ್ಲಿ ನಡೆಯಲಿವೆ. </p><p>ಭಾರತದಲ್ಲಿ ಸರಣಿ ಗೆಲ್ಲಲು ದಕ್ಷಿಣ ಆಫ್ರಿಕಾ ತಂಡಕ್ಕಿರುವ ಸವಾಲುಗಳನ್ನು ಕೇಶವ್ ಮಹರಾಜ್ ಒಪ್ಪಿಕೊಂಡಿದ್ದಾರೆ. ‘ಭಾರತ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸಬೇಕೆಂಬುದು ನಮ್ಮ ನಿಜವಾದ ಹಸಿವು ಮತ್ತು ಬಯಕೆಯಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೈಕಲ್ನಲ್ಲಿ ಇದು ಅತ್ಯಂತ ಕಠಿಣ ಪ್ರವಾಸಗಳಲ್ಲಿ ಒಂದಾಗಲಿದೆ’ ಎಂದಿದ್ದಾರೆ.</p><p>‘ಇದು ನಮ್ಮ ಅತೀ ದೊಡ್ಡ ಪರೀಕ್ಷೆಗಳಲ್ಲಿ ಒಂದಾಗಿದೆ ಎಂದು ನಾವು ಭಾವಿಸುತ್ತೇನೆ. ನಮ್ಮ ತಂಡ ಡಬ್ಲೂಟಿಸಿ ಸೈಕಲ್ನಲ್ಲಿ ಎಷ್ಟರ ಮಟ್ಟಿಗೆ ಸಿದ್ಧತೆ ಮಾಡಿಕೊಂಡಿದೆ ಎಂಬುದನ್ನು ತಿಳಿದುಕೊಳ್ಳಲು ಭಾರತ ಪ್ರವಾಸ ಉತ್ತಮ ಅವಕಾಶ ನೀಡಲಿದೆ’ ಎಂದು ತಿಳಿಸಿದ್ದಾರೆ. </p><p>‘ನಾವು ಭಾರತದ ಪಿಚ್ಗಳಲ್ಲಿ ಪಾಕಿಸ್ತಾನದಲ್ಲಿ ನೋಡಿದಷ್ಟು ಸ್ಪಿನ್ ಸ್ನೇಹಿ ಪಿಚ್ಗಳನ್ನು ನೋಡುವುದಿಲ್ಲ ಎಂದು ಭಾವಿಸುತ್ತೇನೆ. ಇಲ್ಲಿ ಬ್ಯಾಟರ್ ಹಾಗೂ ಬೌಲರ್ ಇಬ್ಬರಿಗೂ ಸಮಾನ ಅವಕಾಶ ನೀಡುತ್ತಾರೆ. ನಾವು ನಮ್ಮ ಸಾಂಪ್ರದಾಯಿಕ ಆಟಕ್ಕೆ ಮನ್ನಣೆ ನೀಡುತ್ತೇವೆ’ ಎಂದು ಕೇಶವ್ ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>